Tuesday, 19 April 2022

ವಿದ್ಯೆಯನ್ನು ಜಾತಿಗೆ ಸೀಮಿತಗೊಳಿಸಿದ್ದು ಯಾರು?

ಭಾರತದ ಜಾತಿಯನ್ನು ಕುರಿತು ಸಾಕಷ್ಟು ಕೇಳಿದ್ದೇವೆ, ಮಾತಾಡುತ್ತಲೇ ಇರುತ್ತೇವೆ. ವಿದ್ಯೆ ಒಂದು ಜಾತಿಗೆ ಮಾತ್ರ ಸೀಮಿತವಾಗಿತ್ತು ಎಂದೂ ಹೇಳುತ್ತೇವೆ. ಇದು ಬ್ರಟಿಷರು ಹೇಳಿಕೊಟ್ಟ ಗಿಣಿ ಪಾಠ ಎಂದರೆ ಅನೇಕರು ನಂಬುವುದಿಲ್ಲ. ಇಲ್ಲಿ ಒಬ್ಬ ಬ್ರಿಟಿಷ್‌ ಉಲ್ಲೇಖಿಸಿದ ಮಾತಿದೆ. ಜಾಗೃತರಾಗಿ ಓದಿ....



ಆಕ್ಸ್ಫ಼ರ್ಡ್ ವಿಶ್ವವಿದ್ಯಾನಿಲಯದ ಎ.ಇ. ಡಾಬ್ಸ್ ಪ್ರಕಾರ ಪ್ರೊಟೆಸ್ಟಂಟ್ ಕ್ರಾಂತಿಗೆ ಮೊದಲು ಇಂಗ್ಲೆಂಡಿನ ಬಡವರ ಮುಖ್ಯ ದತ್ತಿ ಶಾಲೆ ಮತ್ತು ಮುಖ್ಯ ವ್ಯಾಕರಣ ಶಾಲೆ ಅಂತೆಯೇ ಧರ್ಮ ಶಾಸ್ತ್ರದ ಶಿಕ್ಷಣ ಕೊಡುವ ಮತ್ತು ಕಾನೂನು ಮತ್ತು ವೈದ್ಯದ ಶಿಕ್ಷಣ ಶಾಲೆಗಳು ಬಹಳ ಪ್ರಮುಖ ಸ್ಥಾನ ಪಡೆದುಕೊಂಡಿದ್ದವು ಮತ್ತು ಈ ಶಾಲೆಗಳಲ್ಲಿ ಬೋಧನೆ ಕಡ್ಡಾಯವಾಗಿರಲಿಲ್ಲ. ಇಲ್ಲಿ ಕೆಲವು ವ್ಯವಸ್ಥೆಗಳನ್ನು ಮಾಡಲಾಗಿತ್ತು. ಸಂಸ್ಥೆಗಳ ವ್ಯವಸ್ಥೆಗಾಗಿ ಬಡವರನ್ನು ತಲುಪಲು ಕೆಲವು ವ್ಯವಸ್ಥೆ ರೂಪಿಸಲಾಯಿತು. ಮುಂದುವರಿದು ನಿಯಮಾವಳಿ ರೂಪಿಸಲಾಯಿತು: ‘ಯಾರಾದರೂ ಜಮೀನು ಹೊಂದದಿದ್ದರೆ ಅಥವಾ ವಾರ್ಷಿಕ 20 ಷಿಲ್ಲಿಂಗ್‍ನಷ್ಟು ಬಾಡಿಗೆ ಕೊಡಲಾಗದಿದ್ದರೆ ಯಾವುದೇ ನಗರದ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಬಾರದು. ಆದರೆ ಅವರನ್ನು ತಮ್ಮ ತಂದೆ ಅಥವಾ ತಾಯಿಯ ಅನುಕೂಲಕ್ಕಾಗಿ ಕಾರ್ಮಿಕರಾಗಿ ಸೇರಬಹುದು. ಅಂತೆಯೇ ಇದು ಯಾವುದೇ ಪಾಲಕ ತಮ್ಮ ಮಕ್ಕಳನ್ನು ಸಾಹಿತ್ಯ ಕಲಿಯಲು ಕಳುಹಿಸಬಹುದೆಂದು ಹೇಳಿತ್ತು'.

ಸುಮಾರು 16ನೆಯ ಶತಮಾನದ ಮಧ್ಯಭಾಗದಿಂದ ಇದಕ್ಕೆ ವಿರುದ್ಧವಾದ ಪ್ರವೃತ್ತಿ ಕಾಣಿಸಿಕೊಳ್ಳತೊಡಗಿತು. ಇದು ಚರ್ಚುಗಳಲ್ಲಿ ಬೈಬಲ್ಲಿನ ಇಂಗ್ಲಿಷ್ ಆವೃತ್ತಿಯನ್ನು ಓದಬಾರದೆಂಬ ಕಾನೂನು ಜಾರಿಯಾಗಲು ಕಾರಣವಾಯಿತು. ಶ್ರೀಮಂತರು ವ್ಯಾಪಾರಿಗಳು ಮತ್ತು ಕೆಲವು ಗೃಹಸ್ಥರಿಗೆ ಖಾಸಗಿ ಓದಿನ ಹಕ್ಕಿಗೆ ಅವಕಾಶ ಕೊಡಲಾಯಿತು. ಇದನ್ನು ಕಲಾಕಾರರು ಪ್ರವಾಸಿಗರು ಮತ್ತು ಸೇವಕರು ಜನಸಾಮಾನ್ಯರು, ಕಾರ್ಮಿಕರು ಮುಂತಾದವರಿಗೆ ಸ್ಪಷ್ಟವಾಗಿ ನಿರಾಕರಿಸಲಾಯಿತು. ಇವರು ಧರ್ಮಗ್ರಂಥಗಳ ಮುಕ್ತ ಬಳಕೆಗೆ ಅರ್ಹರಲ್ಲ ಎಂದು ಭಾವಿಸಲಾಯಿತು. ಈ ಹೊಸ ಪ್ರವೃತ್ತಿಯ ಪ್ರಕಾರ ಒಬ್ಬ ರೈತನ ಮಗ ಉಳುಮೆಗೆ ಹೋಗಬೇಕು, ಕಲಾವಿದನ ಮಗ ಕಲಾವಿದನಾಗಬೇಕು, ಅಂತೆಯೇ ವ್ಯಾಪಾರಿಯ ಮಗ ವ್ಯಾಪಾರವನ್ನೇ ಮಾಡಬೇಕು. ಹಾಗೇಯೇ ಒಬ್ಬ ಪದವೀಧರನ ಮಗ ಸರ್ಕಾರದ ತಿಳಿವಳಿಕೆ ಮತ್ತು ನಿಯಮವನ್ನು ಸಾಮಾನ್ಯರ ಒಳಿತಿಗಾಗಿ ತಿಳಿದುಕೊಳ್ಳಬೇಕು. ಯಾವುದೇ ಇತರ ಸಂಗತಿಯಂತೆ ರೈತ ಕೂಡ ನಮಗೆ ಅಗತ್ಯವಾಗಿದ್ದಾನೆ. ಎಲ್ಲರೂ ಶಾಲೆಗೆ ಹೋಗಲು ಸಾಧ್ಯವಾಗದಿರಬಹುದು.

No comments:

Post a Comment