Thursday, 5 May 2022

ಕೊರೊನಾ ವಿರುದ್ಧ ಭಾರತೀಯ ಜನಪದರ ಹೋರಾಟ : ನಾಗರಿಕರಿಗೆ ಒಂದು ಪಾಠ


2019-20ರಲ್ಲಿ ಪ್ರಪಂಚದಾದ್ಯಂತ ಕೊರೊನಾ ವೈರಾಣು ದಾಳಿ ಇಟ್ಟು ಇಡೀ ಜಗತ್ತನ್ನು ಅಲ್ಲಾಡಿಸಿ ಲಕ್ಷಾಂತರ ಜನರನ್ನು ಬಲಿಪಡಿಯಿತು. ಇಡೀ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿತು. ಅಷ್ಟೇ ಅಲ್ಲ ಜನರ ಜೀವನ ಶೈಲಿ, ಆಹಾರ-ವಿಹಾರ ಪದ್ಧತಿಗಳನ್ನು ಪಲ್ಲಟಗೊಳಿಸಿತು. ಇದು ಆರೇಳು ತಿಂಗಳಿಗೊಮ್ಮೆ ಮೇಲೇಳುತ್ತಾ ಕೊರೊನಾ ಅಲೆಯೆಂದು ಹೆಸರು ಪಡೆಯಿತು. ಭಾರತದಲ್ಲಿ ಈಗ ನಾಲ್ಕನೆಯ ಅಲೆ ಬರಲಿದೆ ಎಂದು ತಜ್ಞರು ಅಂದಾಜು ಮಾಡುತ್ತಿದ್ದಾರೆ. ಆದರೆ ಜನಸಾಮಾನ್ಯರು ಈ ವೈರಸ್ಸಿನ ಕಾಟಕ್ಕೆ ಹೊಂದಿಕೊಂಡಂತೆ ಕಾಣುತ್ತಿದ್ದಾರೆ. ಮೊದಲನೆಯ ಅಲೆಯ ಸಂದರ್ಭದಿಂದ ಸರ್ಕಾರ ಅನೇಕ ರೀತಿಯ ಎಚ್ಚರಿಕೆ ಕ್ರಮಗಳನ್ನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿತ್ತು. ಮೊದಲನೆಯ ಅಲೆಯ ವೇಳೆಗೆ ಆತಂಕ ತುಂಬಾ ಹೆಚ್ಚಾಗಿತ್ತು ಜನರಲ್ಲಿ ಈ ಬಗ್ಗೆ ಅರಿವನ್ನು ಹುಟ್ಟಿಸಲು ವಿಶ್ವ ಸಂಸ್ಥೆ ಸೇರಿದಂತೆ ಪ್ರಪಂಚದ ಎಲ್ಲ ದೇಶಗಳು ಅಸಂಖ್ಯಾತ ಸಂಘಸಂಸ್ಥೆಗಳು ವೈದ್ಯರು ಸಮಾಜ ಸೇವಕರು ಜನರಲ್ಲಿ ಪ್ರಜ್ಞೆ ಮೂಡಿಸಲು ಹೆಣಗಾಡಿದರು. ಇವರೆಲ್ಲರಿಗೆ ನಗರ ಪ್ರದೇಶದ ಮೇಲೆ ಬರವಸೆ ಇತ್ತು. ನಗರದ ಜನತೆ ಈ ಕಾಟದಿಂದ ಬಚಾವಾಗುತ್ತಾರೆ. ಆದರೆ ಗ್ರಾಮೀಣ ಮತ್ತು ಕಾಡುಮೇಡಿನ ಪ್ರದೇಶದಲ್ಲಿರುವ ಜನತೆಗೆ ಈ ಬಗ್ಗೆ ಅರಿವು ಮೂಡಿಸುವುದು ಹೇಗೆ ಎಂಬ ಆತಂಕ ಇತ್ತು.

ಭಾರತದಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿ ಇರಲಿಲ್ಲ ಗ್ರಾಮೀಣ ಮತ್ತು ಕಾಡುಮೇಡಿನ ಜನರನ್ನು ಸಾಮಾನ್ಯವಾಗಿ ಜನಪದ ಗುಂಪುಗಳೆಂದು ಗುರುತಿಸಲಾಗುತ್ತದೆ. ಇವರಲ್ಲಿ ಆಧುನಿಕ ಶಿಕ್ಷಣ, ಸ್ವಚ್ಛತೆಯ ತಿಳಿವಳಿಕೆ ಕಡಿಮೆ, ಸ್ವಾತ್ಯದ ಜಾಗೃತಿ ಕೂಡ ಅಷ್ಟಾಗಿ ಇರುವುದಿಲ್ಲ ಎಂದು ತಿಳಿಯಲಾಗುತ್ತದೆ. ಭಾರತದಲ್ಲಿ ಶೇ. 75ಕ್ಕೂ ಹೆಚ್ಚು ಜನಸಂಖ್ಯೆ ಇಂಥ ಪರಿಸರದಲ್ಲಿ ಇದೇ ಎಂದು ಹೇಳಲಾಗಿದೆ. ಮೊದಲ ಮತ್ತು ಎರಡನೆ ಅಲೆಯ ಸಂದರ್ಭದಲ್ಲಿ ನಿತ್ಯ 50,0000ಕ್ಕೂ ಹೆಚ್ಚು ಪ್ರಕರಣಗಳು ನಿತ್ಯ ದಾಖಲಾಗುತ್ತಿದ್ದವು ಆದರೆ ಜನಪದರ ಪ್ರದೇಶದಲ್ಲಿ ಇಂಥ ಪ್ರಕರಣ 1,000 ಪ್ರಕರಣವನ್ನು ದಾಟುತಿರಲಿಲ್ಲ. ಹೆಚ್ಚು ಪ್ರಕರಣಗಳು ನಗರದಲ್ಲಿ ಮಾತ್ರ ದಾಖಲಾಗುತ್ತಿದ್ದವು. ನಗರ ಪ್ರದೇಶದ ಜನರ ಆತಂಕವನ್ನು ಸುಳ್ಳು ಮಾಡಿದ್ದು ಈ ಜನಪದರು. ಇದು ಹೇಗೆ? ಇದು ವ್ಯಂಗ್ಯ ಎನಿಸಿದರೂ ಸತ್ಯ. ಆನಪದರು ಆಧುನಿಕ ಶಿಕ್ಷಣವನ್ನು ಪಡೆಯದೇ ಇರಬಹುದು. ವಿಶ್ವಸಂಸ್ಥೆ ಹೇಳಿದ ಆರೋಗ್ಯ ಸೂತ್ರವನ್ನು ತಿಳಿಯದೆ ಇರಬಹುದು. ಆದರೆ ಇವರು ಈ ವೈರಸ್ಸಿನ ಕಾಟದಿಂದ ಬಚಾವಾದರು. ಇದಕ್ಕೆ ಕಾರಣ ಜನಪದರ ಸಂಪ್ರದಾಯದ ಆಚಾರ-ವಿಚಾರದ ನಿಷ್ಠೆ. ಕಾರಣವೆಂದರೆ ಅತೀಶಯೋಕ್ತಿ ಅಲ್ಲ. ಕೊರೊನಾ ಪ್ರಕರಣದಲ್ಲಿ ಹೆಚ್ಚು ಸಾವು-ನೋವು ಉಂಟಾದುದು ಆಧುನಿಕ ಶಿಕ್ಷಣವನ್ನು ಹೆಚ್ಚಾಗಿ ಪಡೆದ ಎಲ್ಲ ಬಗೆಯ ಸಂವಹನ ಚಿಕಿತ್ಸೆ ಸವಲತ್ತುಗಳು ಲಭ್ಯವಿರುವ ಮಹಾನಗರಗಳ ಜನತೆ ಎಂಬುದು ಮತ್ತೊಂದು ವ್ಯಂಗ್ಯವಾಗಿದೆ.

ಮಹಾನಗರಗಳಲ್ಲಿ ಕೊರೊನಾ ಪ್ರಕರಣ ನಿತ್ಯ ಐವತ್ತು ಸಾವಿರವನ್ನು ದಾಟುತ್ತಿದ್ದಂತೆ ಅಕ್ಷರಸ್ಥರು, ವೈದ್ಯರು, ಸರ್ಕಾರಗಳು ನಡುಗಲು ಆರಂಭಿಸಿದವು. ಮಹಾನಗರಗಳಲ್ಲಿ ಎಲ್ಲ ಕಡೆ ಸ್ಯಾನಿಟೈಸೇಶನ್ ಎಂಬ ಹೊಸ ಪರಿಕಲ್ಪನೆಯನ್ನು ಈ ಸಾಂಕ್ರಾಮಿಕ ರೋಗ ತಡೆಯಲು ಕಂಡುಕೊಳ್ಳಲಾಗಿತ್ತು ಜೊತೆಗೆ ಜೊತೆಗೆ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿತ್ತು. ಈ ತಿಳಿವಳಿಕೆ ಜನಪದರಿಗೆ ಇಲ್ಲ ಇದನ್ನು ಅವರಿಗೆ ತಲುಪಿಸುವುದು ಕೂಡ ಕಷ್ಟ ಎಂಬುದು ಮೊದಲನೆಯ ಆತಂಕವಾದರೆ ಇಂಥ ಪ್ರದೇಶಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಿರಲಿ, ಉತ್ತಮ ಔಷಧಿ ಅಂಗಡಿ ಕೂಡ ಇರುವುದಿಲ್ಲ. ಈಗಲೂ ಭಾರತದ ಬಹುತೇಕ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲೂ ಈ ಬಗೆಯ ವ್ಯವಸ್ಥೆ ಇರುವುದು ಅಪರೂಪವಾಗಿದೆ. ಪರಿಸ್ಥಿತಿ ಹೀಗಿರುವಾಗ ಗ್ರಾಮೀಣ ಮತ್ತು ಕಾಡು-ಮೇಡಿನ ಪರಿಸ್ಥಿತಿಯ ಬಗ್ಗೆ ಕೇಳುವಂತಿಲ್ಲ ಹಾಗೂ ಇಂಥ ಪ್ರದೇಶದಲ್ಲೇ ಜನಸಂಖ್ಯೆ ಹೆಚ್ಚಾಗಿರುವುದು ಇಂಥ ಕಡೆ ಏನಾದರೂ ಸಾಂಕ್ರಾಮಿಕ ಹರಡಿದರೆ ಗತಿ ಏನು ಎಂಬುದು ಆತಂಕದ ನಿಜವಾದ ಕಾರಣವಾಗಿತ್ತು. ಆದರೆ ನಮ್ಮ ಜನಪದರು ಆತಂಕವನ್ನು ಸುಳ್ಳಾಗಿಸಿದರು. ನಗರದಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದರೆ ಗ್ರಾಮೀಣ ಭಾಗದಲ್ಲಿ ಪ್ರಕರಣಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿತ್ತು ಇದನ್ನು ಗಮನಿಸಿದ ಮಾಧ್ಯಮಗಳು ಮತ್ತು ಸಿನಿಕರು ಸರ್ಕಾರ ಗ್ರಾಮೀಣ ಭಾಗದಲ್ಲಿ ಸರಿಯಾಗಿ ಪರೀಕ್ಷೆ ನಡೆಸುತ್ತಿಲ್ಲ ಮತ್ತು ಅಧಿಕಾರಿಗಳು ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂದು ಹೇಳಲು ಆರಂಭಿಸಿದರು. ಕೊರೊನಾ ಕಾಟ ಅತಿಯಾಗಿದ್ದ 2020ರ ಮೇ ಮೊದಲ ವಾರದಲ್ಲಿ ಈ ಬಗ್ಗೆ ವಿಶೇಷವಾಗಿ 61 ಅಧ್ಯಯನಗಳನ್ನು ನಡೆಸಲಾಗಿದೆ. ಇವುಗಳ ಪ್ರಕಾರ ಶಂಕಿತ ಕೋವಿಡ್ -19 ಸಾವಿನ ಪ್ರಕರಣಗಳಲ್ಲಿ 1 ಅಥವಾ ಹೆಚ್ಚು ಪ್ರಕರಣಗಳು ಹಳ್ಳಿಗಳಿಂದ ಅದರಲ್ಲೂ ಉತ್ತರ ಪ್ರದೇಶ, ಬಿಹಾರ, ಹರಿಯಾಣ, ಜಾರ್ಕಂಡ್, ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳಿಂದ ಬಂದಿದ್ದವು. ಇವುಗಳಲ್ಲಿ ಬಹುತೇಕ ಸಾವು ಅನೇಕ ಇತರ ಕಾರಣಗಳಿಂದ ಉಂಟಾಗಿದ್ದವು. ಹಾಗೇ ನೋಡಿದರೆ ನಿಜವಾದ ಕೊರೊನಾ ಪ್ರಕರಣಗಳಿಂದ ಈ ಪ್ರದೇಶಗಳಲ್ಲಿ ಸತ್ತವರ ಸಂಖ್ಯೆ ಶೇ. 0.5 ರಿಂದ ಶೇ. 0.27ರಷ್ಟಿತ್ತು. ನಿತ್ಯ ನಡೆಯುತ್ತಿದ್ದ 15 ಸಾವುಗಳಲ್ಲಿ ಒಂದು ಸಾವು ಇದರಿಂದ ನಡೆಯುತ್ತಿತ್ತು ಎಂದು ವರದಿಗಳು ಹೇಳಿದ್ದವು. ಅಚ್ಚರಿ ಎಂಬಂತೆ ಭಾತರದಲ್ಲಿ ಐದು ಸಾವಿರಕ್ಕಿಂತ ಹೆಚ್ಚು ಜನವಸತಿ ಇರುವ ಹಳ್ಳಿಗಳೇ ಇಲ್ಲ ಎಂದು ಹೇಳಲಾಗಿದೆ. ಇಂಥ ಹಳ್ಳಿಗಳಲ್ಲಿ ಕೋವಿಡ್‍ನ ಎರಡನೆ ಅಲೆ ಬಂದಾಗ ಒಂದೇ ಒಂದು ಪ್ರಕರಣ ಕೂಡ ದಾಖಲಾಗಿರಲಿಲ್ಲ. ಇಂಥ ಅನೇಕ ಹಳ್ಳಿಗಳು ಕರ್ನಾಟದಲ್ಲಿ ಕೂಡ ಕಾಣಿಸಿಕೊಂಡಿವೆ.

ಈ ಅಚ್ಚರಿಗೆ ನಿಜವಾದ ಕಾರಣವೆಂದರೆ ಗ್ರಾಮೀಣ ಜನತೆ ಹೆಚ್ಚಾಗಿ ಸಂಪ್ರದಾಯಕ್ಕೆ ಅಂಟಿಕೊಂಡಿರುವುದು. ಇಂದಿಗೂ ಒಬ್ಬ ವ್ಯಕ್ತಿ ಪೇಟೆಗೆ ಹೋಗಿ ಬಂದಾಗ ಮನೆಯೊಳಗೆ ಬರುವ ಮುಂಚೆ ಕೈಕಾಲು ಮುಖಗಳನ್ನು ಸ್ವಚ್ಚವಾಗಿ ತೊಳೆದುಕೊಂಡು, ಬಟ್ಟೆ ಬದಲಿಸಿಕೊಂಡು ಒಳಬರಬೇಕಾದುದು ಸಂಪ್ರದಾಯ. ಗ್ರಾಮೀಣ ಜನತೆ ಇದನ್ನು ಇಂದಿಗೂ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ ನಗರದ ಜನತೆ ಈ ಪದ್ಧತಿಯಲ್ಲಿ ಅರ್ಥವಿಲ್ಲವೆಂದು ಅನೇಕ ವರ್ಷಗಳ ಹಿಂದೆಯೇ ಕೈಬಿಟ್ಟಿದೆ. ಸಾಲದಕ್ಕೆ ಹೊರಗೆ ಓಡಾಡಿಕೊಂಡು ಬಂದ ಚಪ್ಪಲಿ, ಶೂ ಮತ್ತು ಬಟ್ಟೆಗಳನ್ನು ಧರಿಸಿಯೇ ಊಟ, ತಿಂಡಿಗಳನ್ನು ಬಿಡುಬೀಸಾಗಿ ಮಾಡುತ್ತಾರೆ. ಅಲ್ಲದೆ ಸಾಂಪ್ರದಾಯಿಕ ಆಹಾರ ಕ್ರಮವನ್ನು ಕೂಡ ನಗರ ಜನತೆ ಕೈಬಿಟ್ಟಿದೆ ಆದರೆ ಗ್ರಾಮೀಣ ಭಾಗದಲ್ಲಿ ಇವು ಇನ್ನೂ ಜೀವಂತವಾಗಿವೆ. ಸಾಂಪ್ರದಾಯಿಕ ರೀತಿಯಲ್ಲಿ ಆರೋಗ್ಯ ಕಾಪಾಡುವ 5000ಕ್ಕಿಂತ ಹೆಚ್ಚಿನ ಕಷಾಯಗಳು ಈ ಅಲೆಯ ಸಂದರ್ಭದಲ್ಲಿ ದೇಶಾದ್ಯಂತ ಕಾಣಿಸಿಕೊಂಡವು ಹಾಗೂ ಅನೇಕಾನೇಕ ಪಾರಂಪರಿಕ ಚಿಕಿತ್ಸಾ ಕ್ರಮಗಳು ಕೂಡ ಹೊರಬಂದವು. ಕೆಲವರು ಇವುಗಳನ್ನು ಬೆಂಬಲಿಸಿದರೆ ಕೆಲವರು ಇವು ಅರ್ಥಹೀನ ಎಂದು ತೆಗಳಿದರು ಆದರೆ ಇವು ಪರಿಣಾಮ ಬೀರಿದಂತೂ ಸುಳ್ಳಲ್ಲ. ಹೆಚ್ಚು ಅಕ್ಷರಸ್ಥರು, ಆಧುನಿಕರು ಎಂದು ಕರೆದುಕೊಂಡ ಯೋರೋಪ್ ಮತ್ತು ಅಮೇರಿಕಾಗಳಲ್ಲಿ ಜನತೆ ಕೊರೊನಾ ಮಾರ್ಗ ಸೂಚಿಗಳ ವಿರುದ್ಧ ಪ್ರತಿಭಟನೆಯ ನಡೆಸಿದ್ದರು. ಭಾರತದಲ್ಲಿ ಹೀಗೆ ಆಗಲಿಲ್ಲ. ನಮ್ಮ ದೇಶದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತೆಗೆದುಕೊಳ್ಳಬೇಕಾದ ಚುಚ್ಚುಮದ್ದು ಪಡೆದವರಲ್ಲಿ ಜನಪದರ ಸಂಖೆಯೇ ಹೆಚ್ಚಾಗಿತ್ತು. ಅಂದರೆ ನಮ್ಮ ಸಂಪ್ರದಾಯದಲ್ಲಿ ಹಳೆಯದು ಮತ್ತು ಹೊಸದರ ಸಂಯೋಜನೆ ಕಾಲದ ಅಗತ್ಯಕ್ಕೆ ತಕ್ಕಂತೆ ಹೋಗಬೇಕೆಂಬ ತಿಳಿವಳಿಕೆ ಇದೆ. ಇದನ್ನು ಅಳವಡಿಸಿಕೊಂಡ ನಮ್ಮ ಜನಪದರು ಕೊರೊನಾ ವಿರುದ್ಧ ಜಯಗಳಿಸಿದ್ದಾರೆ. ಅಲ್ಲದೆ ನಮ್ಮ ಜನರಿಗೆ ಈ ಹಿಂದೆ ಬಂದು ಹೋಗಿದ್ದ ಕಾಲರಾ, ಸಿಡುಬು ಮತ್ತು ಮಲೇರಿಯಾದಂತ ಕಾಯಿಲೆಗಳು ಅನುಭವನ್ನು ಗಳಿಸಿಕೊಟ್ಟಿದ್ದವು ಇದರ ಜ್ಞಾನ ಕೊರೊನಾ ವಿರುದ್ಧ ಹೋರಾಡುವಲ್ಲಿ ನೆರವಾಗಿದೆ ಎಂಬುದು ಕೂಡ ಸುಳ್ಳಲ್ಲ. ಈ ದೃಷ್ಟಿಯಿಂದ ನಗರದಲ್ಲಿ ವಾಸಿಸುವ ಜನತೆ ತಾವು ಎಡವಿದ್ದು ಎಲ್ಲಿ ಎಂಬುದನ್ನು ಜನಪದರಿಂದ ಕಲಿಯಬೇಕಿದೆ.


No comments:

Post a Comment