Saturday, 14 December 2024

ಒಂದು ದೇಶ ಒಂದು ಚುನಾವಣೆ - ಅನಗತ್ಯ ವಿರೋಧ


ಕಳೆದ ಸೆಪ್ಟಂರ‍್ನಲ್ಲಿ ಮೋದಿ ಸರ್ಕಾರ ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ಮಸೂದೆಗೆ ಒಪ್ಪಿಗೆ ಕೊಟ್ಟಿತ್ತು ಈಗ ಇದೇ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ಸರ್ಕಾರ ಬಯಸಿದೆ. ಆದರೆ ಇದಕ್ಕೆ ವಿರೋಧಪಕ್ಷಗಳು ವಿರೋಧ ವ್ಯಕ್ತಮಾಡುತ್ತಿವೆ. ಇದಕ್ಕೆ ಅರ್ಥವಿಲ್ಲ ಏಕೆಂದರೆ ಮೊದಲು ನಮ್ಮ ಸಂವಿಧಾನ ಕರ್ತೃಗಳು ಇದನ್ನೇ ಬಯಸಿದ್ದರು ೧೯೫೨ರಲ್ಲಿ ಮೊದಲಬಾರಿ ಇಂಥ ಪ್ರಯೋಗ ನಡೆದು ೧೯೬೭ರವರೆಗೂ ವೆನ್ನಾಗಿ ನಡೆಯಿತು, ಇದನ್ನು ಈಗ ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷವೇ ಅಳವಡಿಸಿಕೊಂಡು ಯಶಸ್ವಿಯಾಗಿತ್ತು. ಈಗ ಅದು ಈ ವ್ಯವಸ್ಥೆಯನ್ನು ಜನತಂತ್ರ ವಿರೋಧಿ ಎಂದು ವಿರೋಧಿಸುತ್ತಿದೆ. ಈಗ ನಾಲ್ಕು ದಶಕಗಳ ಅನಂತರ ಮೋದಿ ಸರ್ಕಾರ ಮತ್ತೆ ಇದರ  ಮರು ಜಾರಿಗೆ ಆಸಕ್ತಿ ತೋರಿಸುತ್ತಿದೆ. ಇದನ್ನು ವಿರೋಧಿಸುವ ಮುಂಚೆ ಸದ್ಯದ ಪ್ರತ್ಯೇಕ ಚುನಾವಣೆಯ ಅನನುಕೂಲಗಳನ್ನು ಗಂಭೀರವಾಗಿ ಗಮನಿಸಬೇಕು. ಈಗ ನಡೆಯುತ್ತಿರುವ ಒಂದು ಕ್ಷೇತ್ರದ ಚುನಾವಣೆಗೆ ಸರ್ಕಾರ ಅಧಿಕೃತವಾಗಿ ನೂರಾರು ಕೋಟಿ ರೂಗಳನ್ನು ವ್ಯಯಮಾಡುತ್ತಿದೆ. ಸಾಲದ್ದಕ್ಕೆ ಅದರಲ್ಲಿ ಕರ್ತವ್ಯ ನಿರ್ವಹಿಸುವ ನೌಕರರ ಭತ್ಯೆ, ಸಂಭಾವನೆ ಹಾಗೂ ಅಲ್ಲಿನ ಇತರೆ ಖರ್ಚುಗಳೆಲ್ಲ ಖಚಿತ ಲೆಕ್ಕಕ್ಕೆ ಸಿಗುವುದಿಲ್ಲ. ಅಲ್ಲದೇ ಪ್ರತಿ ಪಕ್ಷಗಳು ಹಣ ಮತ್ತು ಶ್ರಮ ಉಳಿತಾಯ ಮಾಡುತ್ತಿರುವ ಸದ್ಯದ ವಿದ್ಯುತ್ ಮತ ಯಂತ್ರಗಳ (ಎವಿಎಂ) ಬದಲು ಹಳೆಯ ಮತ ಪತ್ರಗಳ ವ್ಯವಸ್ಥೆ ಬೇಕೆಂದು ಹಠಮಾಡುತ್ತಿವೆ. ಈಗ ಇದಕ್ಕೆ ಒತ್ತಾಯಿಸುತ್ತಿವೆ. ಒಟ್ಟಿನಲ್ಲಿ ಪ್ರತಿಪಕ್ಷಗಳು ವ್ಯವಸ್ಥೆಯನ್ನು ಮುಂದೆ ತಳ್ಳುವ ಬದಲು ನಿಂತಲ್ಲೇ ನಿಲ್ಲಲು ಅಥವಾ ಹಿಂದೆ ತಳ್ಳಲು ಹೊರಟಿವೆ. ಅದಿರಲಿ, ಈಗ ಒಂದು ಚುನಾವಣೆ ವ್ಯವಸ್ಥೆಯ ಗುಣಾವಗುಣ ನೋಡೋಣ. ಈಗಾಗಲೇ ಹೇಳಿದಂತೆ ಭಾರತದಲ್ಲಿ ಇದು ಮೊದಲು ಜಾರಿಯಲ್ಲಿತ್ತು. ಈಗ ಮತ್ತೆ ಜಾರಿಗೊಳಿಸುವ ಯತ್ನಗಳು ನಡೆಯುತ್ತಿವೆ. ಇಷ್ಟರಲ್ಲಿ ಪ್ರಪಂಚದ ಏಳು ದೇಶಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ ಎಂದು ಇದರ ಬಗ್ಗೆ ಅಧ್ಯಯನ ಮಾಡಿದ ಲೋಕಸಭೆಯ ಉನ್ನತ ಮಟ್ಟದ ಸಮಿತಿ ವರದಿಕೊಟ್ಟಿದೆ. ದಕ್ಷಿಣ ಆಫ್ರಿಕ, ಸ್ವೀಡನ್, ಜರ್ಮನಿ, ಬೆಲ್ಜಿಯಂ, ಫಿಲಿಪ್ಪೀನ್ಸ್ ಮತ್ತು ಜಪಾನ್ ದೇಶಗಳು ಯಶಸ್ವಿಯಾಗಿ ನಡೆಸುತ್ತಿವೆ. ಇದರಿಂದ ಖರ್ಚು ಮತ್ತು ಶ್ರಮಗಳು ಕಡಿಮೆ ಆಗುತ್ತವೆ. 

೧೯೬೭ರ ವೇಳೆಗೆ ಕಾಂಗ್ರಸ್ ತನ್ನ ಮಿತ್ರ ಪಕ್ಷಗಳ ಆಂತರಿಕ ವಿರೋಧವನ್ನು ಎದುರಿಸಲು ಹೆಣಗತೊಡಗಿತು. ನಿಧಾನವಾಗಿ ಆಂತರಿಕ ವಿರೋಧ ಹೆಚ್ಚುತ್ತ ಹೋಯಿತು ನೆಹರೂ ನಿಧನದ ಅನಂತರ ಅವರ ಮಗಳು ಇಂದಿರಾಗಾoಧಿ ಅಧಿಕಾರಕ್ಕೆ ಬಂದರು, ಆಡಳಿತ ವಿರೋಧಿ ಅಲೆ ದೇಶದಲ್ಲಿ ಹೆಚ್ಚತೊಡಗಿತು. ವಿರೋಧ ಪಕ್ಷಗಳು ಬಲವಾಗತೊಡಗಿದವು. ಅಲ್ಲಿಯವರೆಗೆ ಚುನಾವಣೆಯಲ್ಲಿ ಗೆಲ್ಲುವುದೇ ಕಾಂಗ್ರೆಸ್ ಎಂಬ ವಾತಾZವರಣವಿತ್ತು. ೧೯೬೭ರಲ್ಲಿ  ಉತ್ತರ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶಹೊತುಪಡಿಸಿ ಉಳಿದೆಡೆಮೊದಲ ಬಾರಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಿತು.  ಆಗ ೫೨೦ ಲೋಕಸಭಾ ಮತ್ತು ೩,೫೬೩  

ಒಂದು ದೇಶ ಒಂದು ಚುನಾವಣೆಯಿಂದ ಪ್ರಾದೇಶಿಕ ಪಕ್ಷಗಳ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಅವರ ಪ್ರಭಾವಕ್ಕೆ ಕುಂದುಬರುತ್ತದೆ ಅನ್ನುವುದು ಇದರ ವಿರೋಧಕ್ಕಿರುವ ಮೊದಲ ಕಾರಣ. ವಿಧಾನಸಭಾ ಸ್ಥಾನಗಳಿಗೂ ಚುವಾವಣೆ ನಡೆಯಿತು. ಕೇಂದ್ರಾಡಳಿತ ಪ್ರದೇಶ ಹೇಗಿದ್ದರೂ ಕೇಂದ್ರದ ಆಡಳಿತದಡಿಯಲ್ಲೇ ಬರುವುದರಿಂದ ಅದರ ಆದ್ಯತೆ ಪ್ರತ್ಯೇಕವಾಗಿರಲು ಸಂಭವತೆ ಕಡಿಮೆ. ಈ ಕಾರಣಕ್ಕೆಒಂದು ದೇಶ ಒಂದು ಚುನಾವಣೆ ವ್ಯವಸ್ಥೆಯಲ್ಲಿ ಇವನ್ನು ಸೇರಿಸಿಕೊಳ್ಳಲಾಗಿತ್ತು. ಉಳಿದಂತೆ ಸ್ವಾಯತ್ತ ರಾಜ್ಯಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸಲಾಯಿತು. ಸದ್ಯದ ಪ್ರಸ್ತಾವಿತ ಮಸೂದೆಯಲ್ಲೂ ಇದನ್ನು ಉಳಿಸಿಕೊಳ್ಳಲಾಗಿದೆ. 

ಒಂದೇ ಚುನಾವಣೆ ನಡೆದರೆ ಪ್ರಾದೇಶಿಕ ಸಂಗತಿಗಳನ್ನು ಪಕ್ಕಕ್ಕೆ ಸರಿಸುವ ಸಾಧ್ಯತೆ ಹೆಚ್ಚಿರುತ್ತದೆ ಅನ್ನುವುದು ಎರಡನೆಯ ಕಾರಣ.ಪ್ರತ್ಯೇಕ ಚುನಾವಣೆಗಳು ನಡೆದರೆ ರಾಜಕೀಯ ಪ್ರತಿನಿಧಿಗಳ ಜವಾಬ್ದಾರಿ ಹೆಚ್ಚುತ್ತದೆ.ಸಂವಿಧಾನದಲ್ಲಿ ೧೭೨ನೆಯ ವಿಧಿಯಡಿ ಕೊಡಲಾಗಿರುವ ಒಕ್ಕೂಟ ವ್ಯವಸ್ಥೆಯ ಹಕ್ಕು ಇದರಿಂದ ಕುಂಠಿತವಾಗುತ್ತದೆ. ಏಕ ಕಾಲಕ್ಕೆ ಚುನಾವಣೆ ಹಮ್ಮಿಕೊಂಡರೆ ಒಂದೇ ಬಾರಿ ಎವಿಎಂಗ ಬೇಡಿಕೆ ಹೆಚ್ಚಿ ಅವುಗಳ ಪೂರೈಕೆ ಸಮಸ್ಯೆಯಾಗುತ್ತದೆ. ಈ ವ್ಯವಸ್ಥೆಯ ಜಾರಿಗೆ ಸಂವಿಧಾನದ ೮೩,೮೫, ೧೭೨ ಮತ್ತು ೧೭೪ನೆ ವಿಧಿಗಳಿಗೆ ಸೂಕ್ತ ತಿದ್ದುಪಡಿ ತರಬೇಕಾಗುತ್ತದೆ.ಹೀಗೆ ಈ ವ್ಯವಸ್ಥೆಯ ಜಾರಿಗೆ ಒಟ್ಟಿನಲ್ಲಿ ವ್ಯವಸ್ಥಾಪನೆ, ನಿರ್ವಹಣೆಸಂಕೀರ್ಣತೆ, ಸಂವೈಧಾನಿಕ ಅಡೆತಡೆಗಳು,ಜೊತೆಗೆ ರಾಷ್ಟಿಯ ಹಾಗೂ ಪ್ರಾದೇಶಿಕ ಸಂಗತಿಗಳ ಸಮರ್ಥ ಪ್ರಾತಿನಿಧ್ಯ ಸಾಧ್ಯವಾಗುವುದಿಲ್ಲ ಅನ್ನುವ ಕಾರಣಗಳಿವೆ. ಇವುಗಳಿಗೆ ಸೂಕ್ತ ಪರಿಹಾರ ಮಾರ್ಗಗಳನ್ನು ಹುಡುಕಿ ನಿಧಾನವಾಗಿ ಇದನ್ನು ಜಾರಿಗೆ ಮಾಡುವ ಬಗ್ಗೆ ಯೋಚಿಸುವುದು ಸೂಕ್ತವೆನಿಸುತ್ತದೆ. ಇದು ದೇಶಾದ್ಯಂತ ಮುಕ್ತ ಚರ್ಚೆಗೆ ಮೊದಲು ಒಳಗಾಗಬೇಕು, ಈ ವ್ಯವಸ್ಥೆಯ ಗುಣಾವಗುಣಗಳ ನಿಷ್ಕರ್ಷೆ ನಡೆಯಬೇಕು ಏಕೆಂದರೆ ಇದು ಅಂತಿಮವಾಗಿ ನಮ್ಮ ಜನರ ಹಕ್ಕುಬಾಧ್ಯತೆಗೆ ಸಂಬOಧಿಸಿದೆ. ದೇಶ ಮಟ್ಟದ ಸಮಸ್ಯೆಗಳು ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರೆ ಪ್ರಾದೇಶಿಕ ವಿಷಯಗಳು ರಾಜ್ಯ ಚುನಾವಣೆಯಲ್ಲಿ ಮುಖ್ಯವಾಗುತ್ತವೆ. ಏಕ ಕಾಲಕ್ಕೆ ಚುನಾವಣೆ ನಡೆದರೆ ಮತ ಚಲಾಯಿಸುವಾಗ ನಮ್ಮ ಸಾಮಾನ್ಯ ಜನತೆಗೆ ಗೊಂದಲವಾಗುವ ಸಾಧ್ಯತೆ ಹೆಚ್ಚು ಅನ್ನುವುದನ್ನು ಅಲ್ಲಗಳೆಯಲಾಗದು. ಹೀಗಾಗಿ, ಕೇವಲ ರಾಜಕೀಯ ಪಕ್ಷಗಳು ಮಾತ್ರ ಸದನದಲ್ಲಿ ಕುಳಿತು ಚರ್ಚಿಸಿದರೆ ಸಾಕಾಗುವುದಿಲ್ಲ, ದೇಶಾದ್ಯಂತ ಜನರ ಅಭಿಪ್ರಾಯ ಸಂಗ್ರಹಣೆ ನಡೆಯುವುದು ಅಗತ್ಯ. ಏನೇ ಆದರೂ ಇಂಥ ವ್ಯವಸ್ಥೆಯನ್ನು ದಿಢೀರನೆ ಜಾರಿ ಗೊಳಿಸಲು ನಮ್ಮಂಥ ದೇಶದಲ್ಲಿ ಸುಲಭವಲ್ಲ. ಇದು ದೇಶಾದ್ಯಂತ ಮುಕ್ತ ಚರ್ಚೆಗೆ ಬರುವುದಂತೂ ಖಚಿತ ಅನಿಸುತ್ತದೆ.

No comments:

Post a Comment