Friday, 17 January 2025

ನೇಮಕಾತಿ ಕುರಿತ ಯುಜಿಸಿಯ ಹೊಸ ನಿಯಮ - ಒಂದು ವೀಕ್ಷಣೆ


ವಿಶ್ವವಿದ್ಯಾನಿಲಯದ ಅಧ್ಯಾಪಕರು ಮತ್ತು ಶೈಕ್ಷಣಿಕ ಸಿಬ್ಬಂದಿಯ ನೇಮಕಾತಿ ನಿಯಮ ಪರಿಷ್ಕೃತ ನಿಯಮ ಇದೀಗ ಹೊಬಿದ್ದಿದ್ದು ದೇಶಾದ್ಯಂತ ಬಗೆಬಗೆಯ ಚರ್ಚೆಗೆ ಒಳಗಾಗುತ್ತಿದ್ದು ಅವುಗಳಲ್ಲಿ ವಿವಿ ಅಧ್ಯಾಪಕರಾಗಲು ಆಯಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಬೇಕಿಲ್ಲ ಹಾಗೂ ಎನ್ ಇ ಟಿ ಅರ್ಹತಾ ಪರೀಕ್ಷೆ ಪಾಸು ಮಾಡಬೇಕಿಲ್ಲ, ನಿರ್ದಿಷ್ಟ ವಿಷಯಗಳಲ್ಲಿ ಗುಣಮಟ್ಟದ ನಿಯತಕಾಲಿಕಗಳಲ್ಲಿ ಪ್ರಕಟಣೆಯ ಅಗತ್ಯವಿಲ್ಲ ಎಂಬಂಥ ಅಂಶಗಳು ಹೆಚ್ಚು ಚರ್ಚೆಗೆ ಒಳಗಾಗುತ್ತಿವೆ, ಇವನ್ನು ಮುಂದಿಟ್ಟುಕೊಂಡು ಹಾಗಾದರೆ ಯಾರು ಹೇಗೆ ಬೇಕಾದರೂ ವಿವಿ ಶಿಕ್ಷಕರಾಗಬಹುದು ಅನ್ನುವಂಥ ತೇಲು ಹೇಳಿಕೆಗಳು ಕೇಳಿಸುತ್ತಿವೆ. ಆದರೆ ಇದು ಅಷ್ಟು ಸುಲಭವಿಲ್ಲ. ಏಕೆಂದರೆ ಅರ್ಹತಾ ಪರೀಕ್ಷೆಯ ಬದಲಾಗಿ ಬೇರೆ ಷರತ್ತುಗಳನ್ನು ಹೇಳುತ್ತದೆ, ಪದವಿ ಇರಲಿ ಬಿಡಲಿ ಪಾಠ ಮಾಡುವ  ಅರ್ಹತೆ ಮತ್ತು ಆಸಕ್ತ, ಜೊತೆಗೆ ಆಯಾ ಕ್ಷೇತ್ರಗಳಲ್ಲಿನ ಸಾಧನೆಗಳ ಪುರಾವೆ ಇದಕ್ಕೆ ಅಗತ್ಯ. ಇದು ಯಾರು ಬೇಕಾದರೂ ಹೇಗೆ ಬೇಕಾದರೂ ಅನ್ನುವಂತೆ ಅಲ್ಲ, ನಿಯಮಗಳ ಬದಲಾವಣೆ ಮತ್ತು ಸ್ವಲ್ಪ ವಿಸ್ತರಣೆ ಅಷ್ಟೆ. ಹಾಗಂತ ಸದ್ಯ ಚಾಲ್ತಿಯಲ್ಲಿರುವ ವಿವಿ ಅಧ್ಯಾಪಕರ, ಕುಲಪತಿಗಳ ನೇಮಕಾತಿ ಚೆನ್ನಾಗಿತ್ತು ಎಂದಲ್ಲ, ಇದರಲ್ಲೂ ಸಾಕಷ್ಟು ಲೋಪಗಳಿದ್ದವು, ನಾನೇ ನನ್ನ ಸೀಮಿತ ಹದಿನೈದು ವರ್ಷಗಳ ವಿವಿ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕಂಡು ಅನುಭವಿಸಿ ಹತ್ತಿರದಿಂದ ಕಂಡ ಅನುಭವದಲ್ಲಿ ಹೇಳುವುದಾದರೆ ಈಗಿನ ನಿಯಮಗಳ ಆಧಾರದಲ್ಲೇ ಎಂತೆಂಥವರೋ ಅಧ್ಯಾಪಕರಾಗಿ, ಕುಲಪತಿಗಳಾಗಿ ಬಂದಿದ್ದಾರೆ. ಇವರ ನೇಮಕಾತಿಯಲ್ಲಿ ಎಲ್ಲಿಯೂ ನಿಯಮಗಳ ಉಲ್ಲಂಘನೆ ಆಗಿಲ್ಲ, ಆದರೆ ಸೂಕ್ತ ವ್ಯಕ್ತಿಗಳ ನೇಮಕಾತಿ ಆಯ್ತಾ ಎಂಬ ಪ್ರಶ್ನೆಗೆ ಉತ್ತರ ನಿರಾಶಾದಾಯಕ. ಉದಾಹರಣೆಗೆ ನೆನಪಿರುವ ಒಂದು ನಿದರ್ಶನ ಹೇಳುತ್ತೇನೆ. ಹೀಗೆಯೇ ಒ£ಬ್ಬರು ಒಂದು ವಿಷಯದಲ್ಲಿ ಸ್ನಾತಕೋತ್ತರ  ಮತ್ತು ಅದು ಹೇಗೋ ಪಿಎಚ್ ಡಿ ಪದವಿ ಪಡೆದು ಹೇಗಾದರೂ ಮಾಡಿ ಒಂದು ಸರ್ಕಾರಿ ಉದ್ಯೋಗ ಪಡೆಯಲು ಬಯಸಿ ಕೆ ಎಸ್ ಆರ್ ಟಿಸಿ, ಲಿಡ್ ಕರ್, ರೇಷ್ಮೆ ಇಲಾಖೆ ಹೀಗೆ ಸಿಕ್ಕ ಕಡೆ ಅರ್ಜಿ ಸಲ್ಲಿಸಿ ಎಲ್ಲೂ ಕೆಲಸ ಸಿಗದೇ ಒಂದು ವಿವಿಯಲ್ಲಿ ಅಧ್ಯಾಪಕ ಹುದ್ದೆಗೆ ನಿಯಮಾನುಸಾರ ಆಯ್ಕೆ ಆಗಿ ಸದ್ಯ ಹಿರಿಯ ಪ್ರಾಧ್ಯಾಪಕರಾಗಿ ಹಾಯಾಗಿದ್ದಾರೆ, ಭೇಟಿ ಆದಾಗ ಈಗ ಆರಾಂ ಆಗಿದ್ದೇನಣ್ಣಾ ಅನ್ನುತ್ತಿದ್ದಾರೆ. ಆದರೆ ಅವರ ಪಾಠ ಕೇಳಬೇಕಾದ ವಿದ್ಯಾರ್ಥಿಗಳು ಮಾತ್ರ ಇವರು ಅದು ಹೇಗೆ ಇಲ್ಲಿ ಮೇಷ್ಟಾçದರೆಂದು ಇದು ನಮ್ಮ ಕರ್ಮ ಎಂದು ಹೇಳುತ್ತಿದ್ದಾರೆ. ಇಂಥ ಸಾವಿರಾರು ನಿದರ್ಶನಗಳು ಉನ್ನತ ಶಿಕ್ಷಣದಲ್ಲಿ ಈಗ ಸಿಗುತ್ತವೆ, ಆದರೆ ಇಲ್ಲಿ ಎಲ್ಲೂ ನಿಯಮ ಉಲ್ಲಂಘನೆ ಆಗಿಲ್ಲ. ಇಂಥ ಹುದ್ದೆ ತುಂಬುವ ನಿಯಮಗಳಿಂದ ಆಗುವ ಪ್ರಯೋಜನ ಏನು? ಇನ್ನು ಪ್ರಕಟಣೆಯ ವಿಷಯ, ಸದ್ಯ ಇರುವ ನಿಯಮ ಬಡ್ತಿ ಪಡೆಯಲು ಆಯಾ ವಿಷಯಗಳಲ್ಲಿ ಅಂತಾರಾಷ್ಟ್ರೀಯ ಮಾನ್ಯತೆಯ ನಿಯತಕಾಲಿಕಗಳಲ್ಲಿ ಪ್ರಕಟಣೆ ಆಗಬೇಕೆಂಬ ನಿಯಮಕ್ಕೆ ಅಡ್ಡಿ ಆಗದಂತೆ ಇಂಗ್ಲಿಷ್ ನಲ್ಲಿ ಯಾರಿಂದಲೋ ಬರೆಸಿ ತಮ್ಮ ಹೆಸರು ಹಾಕಿಕೊಂಡು ಹುದ್ದೆಯಲ್ಲಿ ಮೇಲೇರಿದವರಿಗೆ ಕೊರತೆ ಇಲ್ಲ, ಇಂಥ ಲೋಪಗಳನ್ನು ಸರಿಪಡಿಸುವುದು ಸದ್ಯದ ನಿಯಮದ ಉದ್ದೇಶ ಅನ್ನಬಹುದು, ಆದರೆ ಬರೀ ನಿಯಮಗಳ ಭಾರದಿಂದ ವ್ಯವಸ್ಥೆ ಸರಿ ಹೋಗುವುದಿಲ್ಲ, ನಾಲ್ಕಾರು ದಶಕಗಳ ಹಿಂದೆ ಅಧ್ಯಯನ, ಅಧ್ಯಾಪನಗಳಲ್ಲಿ ನೈಜ ಆಸಕ್ತಿ ಇದ್ದವರು ಮಾತ್ರ ವಿವಿಗಳಲ್ಲಿ ಶಿಕ್ಷಕರಾಗಿ ಸೇರುತ್ತಿದ್ದರು. ಕೆಲವು ವರ್ಷಗಳ ಹಿಂದೆ ಕನ್ನಡ ವಿಷಯದಲ್ಲಿ ಖ್ಯಾತ ವಿದ್ವಾಂಸರು ಹಾಗೂ ಅತ್ಯುತ್ತಮ ಅಧ್ಯಾಪಕರೊಬ್ಬರು ಈ ಯುಜಿಸಿ ಎನ್ ಇ ಟಿ ಪರೀಕ್ಷೆಗಳ ಮಾದರಿಯನ್ನೂ ಪ್ರಶ್ನೆಗಳನ್ನೂ ನೋಡಿ ಇಂಥವಿದ್ದರೆ ನಾವೆಲ್ಲ ಇಲ್ಲಿ ಮೇಷ್ಟ್ರುಗಳಾಗುತ್ತಿರಲಿಲ್ಲ, ಮಾತ್ರವಲ್ಲ, ಈಗ ಇವನ್ನು ಪಾಸು ಮಾಡಿದ್ರೆ ಮಾತ್ರ ಇಲ್ಲಿ ಉಳಿಯುತ್ತೀರಿ ಅಂದರೂ ನಮ್ಮಿಂದ ಇದನ್ನೆಲ್ಲ ಪಾಸು ಮಾಡಲು ಆಗದಪ್ಪಾ ಅಂದಿದ್ದರು. ಅಚ್ಚರಿ ಆಗಿತ್ತು. ಆದರೆ ಇಂಥ ಪರೀಕ್ಷೆಗಳನ್ನು ಪಾಸು ಮಾಡಿದ್ದಾರೆಂದು ಪ್ರಮಾಣ ಪತ್ರ ಹೊಂದಿಯೂ ಪಾಠ ಮಾಡಲು ಅಯೋಗ್ಯರೆಂದು ವಿದ್ಯಾರ್ಥಿಗಳೇ ಘೋಷಿಸಿದ ಸಾಕಷ್ಟು ನಿದರ್ಶನಗಳಿವೆ, ಇದಕ್ಕೆ ಉತ್ತರ ಕಂಡುಕೊಳ್ಳಲು ಶಿಕ್ಷಕರ ಆಯ್ಕೆ ಮಾಡುವಾಗ ಸಂಸ್ಥೆಗಳು ಅಭ್ಯರ್ಥಿಗಳಿಂದ ಬೋಧನೆಯ ಪ್ರಾತ್ಯಕ್ಷಿಕೆ  ಪಡೆದು ವಿದ್ಯಾರ್ಥಿಗಳಿಂದ ಹಾಗೂ ಹಿರಿಯ ಶಿಕ್ಷಕರಿಂದ ಅದರ ಹಿಮ್ಮಾಹಿತಿ ಪಡೆದು ನೇಮಕ ಮಾಡಿಕೊಳ್ಳುವ ಪದ್ಧತಿಯೂ ಇದೆ. ಹೊಸ ನಿಯಮಾವಳಿ ಇದನ್ನು ಒಂದು ರೀತಿ ಕಡ್ಡಾಯಗೊಳಿಸುತ್ತದೆ. 

ಇನ್ನು ಈಗಲೂ ಹಣ ಇರುವವರು ಒಳ ದಾರಿಯಲ್ಲಿ ಕುಲಪತಿಗಳಾಗಿ ಶಿಕ್ಷಕರಾಗಿ ಬರುತ್ತಿದ್ದಾರೆಂಬುದು ಸುಳ್ಳಲ್ಲ. ಆದರೆ ಸದ್ಯದ ನಿಯಮಾನುಸಾರ ಎಲ್ಲ ಪ್ರಾಥಮಿಕ ಅಗತ್ಯಗಳನ್ನೂ ಪೂರೈಸಿರುತ್ತಾರೆ, ಹಾಗೆ ನೋಡಿದರೆ ಒಂದು ಹುದ್ದೆಗೆ ಹೀಗೆ ಅಗತ್ಯ ನಿಯಮ ಪೂರೈಸಿದ ನೂರಾರು ಅಭ್ಯರ್ಥಿಗಳು ಇರುತ್ತಾರೆ. ಇಂಥ ಕಡೆ ಭ್ರಷ್ಟಾಚಾರ ಸಹಜವಾಗಿ ಜಾಗ ಪಡೆಯುತ್ತದೆ. ಇಲ್ಲಿ ಭ್ರಷ್ಟಾಚಾರ ಅಂದ್ರೆ ಬರೀ ಹಣವಲ್ಲ, ವಶೀಲಿ, ಪ್ರಭಾವ ಬೀರುವುದು ಇತ್ಯಾದಿ ಏನಾದರೂ ಆಗಬಹುದು.ಇಂಥವನ್ನು ನಿಯಮಗಳಿಂದ ಸರಿಪಡಿಸಲು ಆಗದು. ಹಾಗೆ ನೋಡಿದರೆ ನಿಯಮಗಳು ಹೆಚ್ಚಾದಷ್ಟೂ ಒಳದಾರಿಗಳು ಹೆಚ್ಚಾಗುತ್ತವೆ ಬಿಟ್ಟರೆ ಶುದ್ಧತೆ ಬರುವುದಿಲ್ಲ.ಇವನ್ನೆಲ್ಲ ಸರಿ ಪಡಿಸುವ ನಿಯಮಗಳು ಯಾವಾಗಲಾದರೂ ರೂಪುಗೊಳ್ಳಲು ಸಾಧ್ಯವೇ? ಇಂಥ ನಿಯಮ ಬದಲಾವಣರಗಳು ಆಗಾಗ ಆಗುತ್ತಲೇ ಇರುತ್ತವೆ. ಇದು ಅಂತಿಮವೇನೂ ಅಲ್ಲ, ಕಾಲ ಕಾಲಕ್ಕೆ ನಿಯಮಗಳು ಬದಲಾಗುತ್ತಲೇ ಇರುತ್ತವೆ. ಹಾಗೆ ನೋಡಿದರೆ ಈಗಿನ ಬದಲಾದ ನಿಯಮ ವಿಷಯ ಪರಿಣತೆಯನ್ನು ಅಪೇಕ್ಷಿಸುತ್ತದೆ, ಇದೊಂದು ಗುಣಾತ್ಮಕ ಅಂಶ. ಇಂದಿನ ನಮ್ಮ ಸಮಾಜದಲ್ಲಿ ಕಲಿತ ಪದವಿಗೂ ಮಾಡುತ್ತಿರುವ ಉದ್ಯೋಗದಲ್ಲೂ ಸಂಬಂಧವಿಲ್ಲದೇ ಅಲ್ಲಿ ಸಾಕಷ್ಟು ಯಶಸ್ಸು ಕಂಡ ಸಾಕಷ್ಟು ನಿದರ್ಶನಗಳಿವೆ. ಶಿಕ್ಷಕರಾಗಲು ಯೋಗ್ಯರಾದವರು ಎಲ್ಲೋ ಅಂಗಡಿ ಇಟ್ಟುಕೊಂಡವರು, ಸಿಕ್ಷಕರಾದವರು ಯಾವುದಕ್ಕೂ ಲಾಯಕ್ಕಿಲ್ಲದವರು ಬೇಕಾದಷ್ಟಿದ್ದಾರೆ. ಈಗಾಗಲೇ ಶಿಕ್ಷಕರೆಂದು ನೇಮಕರಾದವರು ಆದರೆ ಅದಕ್ಕೆ ಯೋಗ್ಯರಲ್ಲದವರನ್ನು ಪತ್ತೆ ಮಾಡುವುದು ಕಷ್ಟವಲ್ಲ, ಅಂಥವರನ್ನು ಜರಡಿ ಹಿಡಿಯಲು ಶಿಕ್ಷಕರಿಗೆ ಒಂದೆರಡು ತಿಂಗಳು ವೇತನ ತಡೆ ಹಿಡಿಯಬೇಕು ಅಥವಾ ಅರ್ಧ ಕೊಡಬೇಕು, ಜೊತೆಗೆ ಆ ಸಂರ್ದದಲ್ಲಿ ಜೀವನೋಪಾಯಕ್ಕೆ ಆಯ್ಕೆ ಮಾಡಿಕೊಂಡ ಮಾರ್ಗವನ್ನು ಅವರು ಘೋಷಿಸಬೇಕು. ಹೀಗದರೆ ಅರ್ಧಕ್ಕರ್ಧ ಜನ ಆತ್ಮ ಹತ್ಯೆ ಮಾಡಿಕೊಳ್ಳುತ್ತಾರೆ, ಇದು ಹೊಸ ಹೊಸ ನಿಯಮ ಪ್ರತಿಪಾದಿಸುವ ಅಂತರ್ ಶಿಸ್ತೀಯ ವಿಷಯಗಳ ಪ್ರೋತ್ಸಾಹಕ್ಕೂ ಪೂರಕ ಅನಿಸುತ್ತದೆ. ಸದಯ ಇರುವ ಅಥವಾ ಬದಲಾವಣೆ ಮಾಡಲಾದ ನಿಯಮಗಳಲ್ಲೂ ನ್ಯೂನಗಳಿವೆ. ಹೊಸದಾಗಿ ಕುಲಪತಿಗಳಾಗುವ ವ್ಯಕ್ತಿಗೆ ಆಯಾ ವಿವಿಗಳ ಅಭಿವೃದ್ಧಿಗೆ ಹಾಕಿಕೊಂಡ ನಕ್ಷೆಯನ್ನು ಜನರ ಮುಂದೆ ಇಡುವ ಹಾಗೂ ಹುದ್ದೆಯಿಂದ ಹೊರ ಹೋಗುವಾಗ ಅವನ್ನು ತುಲನೆ ಮಾಡುವ ಕೆಲಸ ಸಾರ್ವಜನಿಕವಾಗಿ ಆಗಬೇಕಿದೆ (ಪಬ್ಲಿಕ್ ಆಡಿಟ್). ಏಕೆಂದರೆ ಬಹುತೇಕ ಕುಲಪತಿಗಳು ವಿವಿಗಳಿಗೆ ಬಂದಿದ್ದು ಹೇಗೆ ಹೋಗುವಾಗ ಅಲ್ಲಿ ಮಾಡಿದ್ದೇನು ಎಂಬುದೇ ಸಮಾಜಕ್ಕೆ ತಿಳಿಯುವುದಿಲ್ಲ,ಇಂಥ ಹೊಣೆಗಾರಿಕೆ ಹೊಸ ನಿಯಮದಲ್ಲೂ ಇಲ್ಲ, ಒಂದೆಂದರೆ ಅದರ ವ್ಯಾಪ್ತಿಯನ್ನು ಹಿಗ್ಗಿಸಲಾಗಿದೆ. ಇಂಥ ಎಷ್ಟೇ ನಿಯಮ ತಂದರೂ ಉನ್ನತ ಶಿಕ್ಷಣ ಸದ್ಯವೇ ಸುಧಾರಿಸಿಬಿಡುತ್ತದೆ ಎಂಬ ಆಸೆ ಇಲ್ಲ.ಇನ್ನೊಂದು ಗುಣಾತ್ಮಕ ಅಂಶ ಹೊಸ ನಿಯಮದ್ದೆಂದರೆ ಪ್ರಾದೇಶಿಕ ಭಾಷೆಗಳಿಗೆ ಕೊಟ್ಟ ಆದ್ಯತೆ. ಇದು ಅಗತ್ಯ ಹಾಗೂ ಅಪೇಕ್ಷಣೀಯ. ಸ್ಥಳೀಯ ಮಟ್ಟದಲ್ಲಿ ವಿಶ್ವವಿದ್ಯಾನಿಲಯಗಳು ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾದೇಶಿಕ ಭಾಷೆಗಳಿಗೆ ಮಹತ್ವ ಕೊಡುತ್ತಿರುವ ಹೊತ್ತಿನಲ್ಲಿ ಇದು ಬೇಕು. ಆದರೆ ಈ ಭಷೆಗಳಲ್ಲಿ ಪ್ರಕಟವಾಗುವ ಬರೆಹ ಅಥವಾ ಸಂಶೋಧನ ಪ್ರಬಂಧಗಳನ್ನು ಇಂಗ್ಲಿಷ್ ಪ್ರಕಟಣೆಗಳ ಜೊತೆ ತುಲನೆ ಮಾಡಿ ಯೋಗ್ಯತೆ ನಿರ್ಧರಿಸುವ ಪ್ರವೃತ್ತಿ ಬದಲಾಗಿ ಇವುಗಳ ಮಾನದಂಡವನ್ನು ¸ಅಳೆಯಲು ಅವುಗಳ ಪರಿಣಾಮ ಸಾರ್ವಜನಿಕವಾಗಿ ಹೇಗಿದೆ ಎಂದು ತಿಳಿಯುವ ಪ್ರತ್ಯೇಕ ಗುಣಮಟ್ಟ  ರೂಪಿಸಬೇಕು.  ಇಂಥ ಕಡೆ ಪ್ರಾದೇಶಿಕ ಭಾಷೆಗಳನ್ನು ಮತ್ತೆ ಇಂಗ್ಲಿಷ್ನಲ್ಲಿ ಅಳೆದರೆ ಮತ್ತೆ ಇಂಗ್ಲಿಷ್ಗೆ ಮಾನ್ಯತೆ ಹೆಚ್ಚುತ್ತದೆ. ಇದು ಬೇಕಿಲ್ಲ. ಮಾನದಂಡ ಬದಲಿಸುವುದು ಕಷ್ಟವಲ್ಲ. ಇದನ್ನು ನೀತಿ ನಿರೂಪಕರು ಗಮನಿಸಬೇಕಿದೆ.

No comments:

Post a Comment