Monday, 4 December 2023

ಗಮನಸೆಳೆಯುವ ಇನ್ನೊಂದು ಕೃತಿ


ಕನ್ನಡದ ಯುವ ಬರೆಹಗಾರ, ಚಿಂತಕರಾದ ಅಜಕ್ಕಳ ಗಿರೀಶ್ ಭಟ್ ಅವರು ಇನ್ನೋದು ಕೃತಿಯನ್ನು ಓದುಗರ ಮುಂದೆ ಇಟ್ಟಿದ್ದಾರೆ. ಇದರ ಹೆ¸ರೇ ಮಜವಾಗಿದೆ. ಅಂದಹಾಗೆ ಈ ಪುಸ್ತಕದ ಹೆಸರು 'ಮುಂದಿನ ರದ್ದಿ'. ಹೌದು, ಜಾಗತಿಕ ಸಂಗತಿ ಹಾಗಿರಲಿ. ಕನ್ನಡದಲ್ಲಿ ಓದುಗರ ಸಂಖ್ಯೆ ಕುಸಿಯುತ್ತಿದೆ ಇತ್ಯಾದಿ ಕೂಗು ಏನೇ ಇರಲಿ, ನಿತ್ಯ ಸುಮಾರು 30 ಹೊಸ ಪುಸ್ತಕಗಳು ಪ್ರಕಟವಾಗುತ್ತಿವೆ ಎಂದು ಸಮೀಕ್ಷೆಯೊಂದು ಹೇಳುತ್ತದೆ. ಇದರ ಜೊತೆಗೆ ಹತ್ತಾರು ರಾಷ್ಟ್ರ ಮಟ್ಟದ ಪತ್ರಿಕೆಗಳು, ಲೆಕ್ಕವಿಲ್ಲದಷ್ಟು ಜಿಲ್ಲಾ ಹಾಗೂ ಸ್ಥಳೀಯ ಮಟ್ಟದ  ದಿನ ಪತ್ರಿಕೆಗಳು, ವಾರ, ಮಾಸ ಪತ್ರಿಕೆಗಳು ಇತ್ಯಾದಿ ಇತ್ಯಾದಿಗಳಿವೆ. ನಷ್ಟವೇ ನಷ್ಟ ಅಂತಿದ್ದರೆ ಇಷ್ಟೆಲ್ಲ ಇರುತ್ತಿದ್ದವೇ? ಸುಮ್ಮನೇ ಗಮನಿಸಿ. ಇವೆಲ್ಲ ಸೇರಿ ಬರೀ ಕನ್ನಡದಲ್ಲಿ ದಿನಕ್ಕೆ ಒಂದೆರಡು ಟನ್ ರದ್ದಿ ತಯಾರಾಗುತ್ತದೆ. ವರ್ಷಕ್ಕೆ ಅದೆಷ್ಟು ಪ್ರಮಾಣ ಊಹಿಸಿ. ಪತ್ರಿಕೋದ್ಯಮದಂತೆಯೇ ರದ್ದಿ ಪತ್ರಿಕೆ ಸಂಗ್ರಹ ಹಾಗೂ ವಿಲೇವಾರಿಯೂ ನಮ್ಮಲ್ಲಿ ಬಹುದೊಡ್ಡ ಉದ್ಯಮ. ದಿನ ಪತ್ರಿಕೆಯ ಹಣೆಬರೆಹ ನೋಡಿ. ಅದನ್ನು ಓದುವವರೆಗೆ ಮಾತ್ರ ಅದು ಹೊಸದು. ಒಮ್ಮೆ ಅದರ ಮೇಲೆ ಕಣ್ಣುಹಾಯಿಸುತ್ತಿದ್ದಂತೆಯೇ ಅದು ರದ್ದಿಯಾಗುತ್ತದೆ. ಹಾಗೆ ನೋಡಿದರೆ ಅಜಕ್ಕಳ ಅವರು ಇಲ್ಲಿ ಎರಡು ರದ್ದಿಗಳನ್ನು ಉತ್ಪಾದಿಸಿಕೊಟ್ಟಿದ್ದಾರೆ. ಇದರಲ್ಲಿ ಸಂಕಲಿತವಾದ 16 ಲೇಖನಗಳು ಒಂದಲ್ಲ ಒಂದು ಪತ್ರಿಕೆಯಲ್ಲಿ ಪ್ರಕಟವಾಗಿ ರದ್ದಿಯಾಗಿ ಹೋದವು. ಇವನ್ನೆಲ್ಲ ಮತ್ತೆ ಸಂಕಲಿಸಿ ಹೊಸ ಪುಸ್ತಕ ರೂಪದಲ್ಲಿ ಕೊಟ್ಟು ಮತ್ತೆ ಹೊಸ ರದ್ದಿಯನ್ನು ತಯಾರಿಸಿಕೊಟ್ಟಿದ್ದಾರೆ. ಒಂದು ಸಂಗತಿಯನ್ನು ಗಮನಿಸಬೇಕು. ಪಂಪನ ಕೃತಿ ರಚನೆಯಾಗಿ ಸಾವಿರ ವರ್ಷಗಳೇ ಸಂದಿವೆ. ಅದರ ಪ್ರಸ್ತುತತೆ ಇಂದಿಗೂ ಉಳಿದು ಅದಿನ್ನೂ ರದ್ದಿಯಾಗಿಲ್ಲ. ಅಂದರೆ ಪ್ರಸ್ತುತ ಅನಿಸುವ ಯಾವ ಬರೆಹವೂ ರದ್ದಿಯಾಗಲು ಸಾಧ್ಯವಿಲ್ಲ ಅಂದಾಯಿತು. ದಿನಪತ್ರಿಕೆಗಳ ಆಯಸ್ಸು ಒಂದೇ ದಿನ ಆದ್ದರಿಂದ ಅದು ಆದಿನವೇ ರದ್ದಿಯಾಗುತ್ತದೆ. ಆದರೆ ಪುಸ್ತಕಗಳು ರದ್ದಿಯಾಗಲು ಸ್ವಲ್ಪ ಕಾಲಾವಕಾಶ ಬೇಕು. ಪಠ್ಯ ಪುಸ್ತಕವಾದರೆ ಅದಕ್ಕೆ ವರ್ಷಗಳ ಆಯಸ್ಸು. ಉತ್ತಮ ಕಾದಂಬರಿಯಾದರೆ ಭೈರಪ್ಪನವರ ಕೃತಿಗಳಂತೆ ಅನಿಶ್ಚಿತ. ಶಬ್ದಕೋಶಗಳು ಬೇಗ ಈ ಗುಂಪಿಗೆ ಬರುವುದಿಲ್ಲ.ಆಗಲಿ. ಪ್ರಸ್ತುತ ಲೇಖಕರು ಈ ಕೃತಿಗೆ ಈ ಹೆಸರು ಕೊಟ್ಟಿದ್ದರೂ ಇದರಲ್ಲಿನ ಹತ್ತಕ್ಕಿಂತ ಹೆಚ್ಚು ಲೇಖನಗಳಿಗೆ ಬೇಗ ರದ್ದಿಯಾಗುವ ಯೋಗವಿಲ್ಲ. ಅವು ಪರಾಮರ್ಶನ ಯೋಗ್ಯವಾಗಿವೆ, ಮತ್ತಮತ್ತೆ ಅಗತ್ಯವಾದವಾಗಿವೆ.ಹಾಗೆ ನೋಡಿದರೆ ಒಮ್ಮೆ ಬರೆದು ಪ್ರಕಟವಾದರೆ ಅದು ರದ್ದಿ ಲೆಕ್ಕವೇ. ಆದರೆ ಇದರಲ್ಲಿ ಸಂಕಲಿತವಾದ ಕೆಲವು ಲೇಖನಗಳ ಬಗ್ಗೆ ಗಂಭೀರ ಚರ್ಚೆ ಆಗಬೇಕಿದೆ.ಉದಾಹರಣೆಗೆ ಧರ್ಮ ಸಂಕಟ, ಭಾರತೀಯ ಮನಸ್ಸು ಇತ್ಯಾದಿ ಲೇಖನಗಳು ಬಹಳ ಗಂಭೀರ ಪ್ರಶ್ನೆಂiÀ. 106 ಪುಟಗಳ ಸಣ್ಣ ಪುಸ್ತಕ ಇದು. ಆದರೆ ಬೀರುವ ಪರಿುನ್ನು ಎತ್ತುತ್ತವೆ. ಇವೆಲ್ಲ ಎಂದಿಗೂ ಹಳೆಯದಾಗುವುದಿಲ್ಲ, ಕಾರಣ ರದ್ದಿ ಸಾಲಿಗೆ ಹೋಗುವುದಿಲ್ಲ. ಇದು 106 ಪುಟಗಳ ಸಣ್ಣ ಕೃತಿ ಇದು.ಆದರೆ ಬೀರುವ ಪರಿಣಾಮ ಹಿರಿದು. ಸಣ್ಣ ಗಾತ್ರದ ಪುಸ್ತಕದಲ್ಲಿ ದೊಡ್ಡ ಪರಿಣಾಮ ಬೀರುವ ಕೃತಿ ರಚನೆ ಮಾಡಬೇಕಾದುದು ಇಂದಿನ ಲೇಖಕರಮುಂದಿನ ಸವಾಲು. ಬೃಹತ್ ಗಾತ್ರದ ಪುಸ್ತಕ ಬರೆಯುವ ಓದುವ  18-19ನೆಯ ಶತಮಾನದ ಟ್ರೆಂಡ್ ಇಂದು ಯಾರಿಗೂ ಇಲ್ಲ.ಜೀವನ ಶೈಲಿ ಹಾಗಿದೆ.ಸಮಯವಿಲ್ಲ. ಅದರಿಂದ ಉಪಯೋಗವೂ ಇಲ್ಲ.ಹೀಗಾಗಿ ಪ್ರಸ್ತುತ ಕೃತಿ ಅನುಪಯುಕ್ತವಾಗಿಬಿಟ್ಟಿದೆ ಅನ್ನುವಂತೆ ಲೇಖಕರು ಮೊದಲೇ ಇದು ಅನುಪಯುಕ್ತ ಅನ್ನುವಂತೆ ಇದನ್ನು ರದ್ದಿ ಅಂದುಬಿಟ್ಟಿದ್ದಾರೆ. ಆದರೆ ವಾಸ್ತವ ಹಾಗಿಲ್ಲ. ಇಂದಿನ ತಂತ್ರಜ್ಞಾನ ಕೂಡ ಬದಲಾಗಿ ರದ್ದಿಯ ಪ್ರಶ್ನೆಯೇ ಎದುರಾಗದಂತೆ ಎಲ್ಲವನ್ನೂ ಡಿಜಿಟಲ್ ರೂಪದಲ್ಲಿ ಕೊಡುವಂತೆ ಮಾಡಿಬಿಟ್ಟಿದೆ. ಹೀಗಾಗಿ ಮುಂದೆ ಒಂದು ದಿನ ರದ್ದಿ ಎಂಬ ಪದವೇ ಜಣ್ಮರೆ ಆಗಬಹುದು- ಆಗುತ್ತದೆ. ಅದರ ಬದಲು ಅನಗತ್ಯ ಎಂಬ ಪದ ಬರಬಹುದು.

ಹಾಗೆಂದ ಮಾತ್ರಕ್ಕೆ ಬರೆದುದೆಲ್ಲ ರದ್ದಿ ಅಲ್ಲ. ಹಾಗಿದ್ದರೆ ಕನ್ನಡದ ಅನೇಕ ಕೃತಿಗಳು ಶತಮಾನಗಳ ಕಾಲ ಉಳಿದುಬರುತ್ತಿರಲಿಲ್ಲ. ಕೃತಿಯೊಂದರ ಯೋಗ್ಯತೆ ಅದರ ಹಣೆಬರೆಹವನ್ನು ನಿರ್ಧರಿಸುತ್ತದೆ. ಅದು ಓದುಗರ ಕೈಲಿದೆ. ಈ ಕಾರಣದಿಂದ ಲೇಖಕು ಇದನ್ನು ರದ್ದಿ ಅಂದರೂ ಅದಿನ್ನೂ ಸಿದ್ಧವಾಗಿಲ್ಲ. ಲೇಖಕರಿಗೆ ಒಳಿತಾಗಲಿ.

ಮುಂದಿನ ರದ್ದಿ

ಲೇ. ಅಜಕ್ಕಳ ಗಿರೀಶ ಭಟ್, ಆಕೃತಿಆಶಯ ಪಬ್ಲಿ ಕೇಶನ್ಸ್, ಮಂಗಳೂರು. ಬೆಲೆ- 150 ರೂ.

No comments:

Post a Comment