Friday, 16 May 2025

ಪಾಕಿಸ್ತಾನ ಅನುಭವಿಸಲೇಬೇಕಾದ ಹುಣ್ಣು- ಬಲೂಚಿಸ್ತಾನ


ಭಾರತ ಮತ್ತು ಪಾಕಿಸ್ತಾನ ನಡುವಿನ ಕದನದ ಸಂದರ್ಭದಲ್ಲಿ ಗಲಾಟೆ ಎಬ್ಬಿಸಿ ತಮ್ಮದು ಪ್ರತ್ಯೇಕ ದೇಶವೆಂದು ಬಲೂಚಿಗಳು ಘೋಷಿಸಿಕೊಂಡಿದ್ದಾರೆ, ಹಾಗೆ ನೋಡಿದರೆ ಬಲೂಚಿಗಳ ಗದ್ದಲ ಇಂದು ನಿನ್ನೆಯದಲ್ಲ, ಅವರು ತಮ್ಮ ಪ್ರತ್ಯೇಕತೆಗಾಗಿ ೧೯೫೦, ೬೦ ಮತ್ತು ೭೭ರಲ್ಲಿ ತೀವ್ರ ಸ್ವರೂಪದ ಗದ್ದಲ ಮಾಡಿದ್ದರು, ಇದಕ್ಕೂ ಬಲವಾದ ಕಾರಣವಿದೆ.ಅಷ್ಟು ಹಿಂದಿನಿಂದಲೂ ತಮ್ಮ ಅಸಮಾಧಾನವನ್ನು ಅವರು ಉಳಿಸಿಕೊಂಡೇ ಬಂದಿದ್ದಾರೆ ಅಥವಾ ಪಾಕಿಸ್ತಾನ ಉಳಿಸಿಕೊಂಡು ಬಂದಿದೆ, ಬಲೂಚಿಸ್ತಾನ ಸದ್ಯದ ಪಾಕಿಸ್ತಾನದಲ್ಲಿನ ಅತ್ಯಂತ ದೊಡ್ಡ ಪ್ರದೇಶ, ಜೊತೆಗೆ ಹೆಚ್ಚು ನೈಸರ್ಗಿಕ ಸಂಪತ್ತು ಹೊಂದಿದ ಭೂಭಾಗ. ಅಲ್ಲಿಂದ ಸಂಪತ್ತು ಸುಲಿಯುವ ಪಾಕಿಸ್ತಾನ ಅಲ್ಲಿಗೆ ಯಾವ ಸವಲತ್ತನ್ನೂ ಕೊಡದೇ ಮೂಲೆಗುಂಪು ಮಾಡಿತ್ತು. ಸಾಲದ್ದಕ್ಕೆ ಬಲೂಚಿಗಳ ಮೇಲೆ ಅಪರಾಧ, ಅತ್ಯಾಚಾರ ಮೊದಲಾದವನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಪಾಕಿಸ್ತಾನದ ಶೇ.೪೪ ಭೂಭಾಗದಲ್ಲಿ ಈ ಪ್ರದೇಶ ಹರಡಿದೆ. ಸಾಲದ್ದಕ್ಕೆ ಜನಸಂಖ್ಯೆ ಕಡಿಮೆ.ಪಾಕ್ ನ ಒಟ್ಟೂ ಜನಸಂಖ್ಯೆಯ ಶೇ.೫ರಷ್ಟು ಜನಸಂಖ್ಯೆ ಮಾತ್ರ ಇಲ್ಲಿಯದು.ಇಲ್ಲಿನ ಹೆಚ್ಚಿನ ಜನ ಸುನ್ನಿ ಜನ, ಇವರಿಗೂ ಶಿಯಾ ಜನಕ್ಕೂ ಆಗಾಗ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇದು ಇರಾನಿನ ದಕ್ಷಿಣ ಭಾಗ, ಸಿಸ್ತಾನ್ ಮತ್ತು ಪಾಕಿಸ್ತಾನದ ಬಲೂಚ್ ಪ್ರದೇಶಗಳನ್ನು ಹಾಗೂ ಈಶಾನ್ಯದಲ್ಲಿ ಆಪ್ಘನ್‌ನ ಹೆಲ್ ಮಾಂಡ್ ಭೂಭಾಗಗಳನ್ನು ಒಳಗೊಳ್ಳುತ್ತದೆ. ಆದರೆ ಒಣ ಗುಡ್ಡಗಾಡು ಹಾಗೂ ಮರುಭೂಮಿ ಇಲ್ಲಿ ಹೆಚ್ಚಾದ ಕಾರಣಕ್ಕೆ ಬಲೂಚಿನ ಹೆಚ್ಚಿನ ಜನವಸತಿ ಪಾಕಿಸ್ತಾನಕ್ಕೆ ಸೇರಿದ ಜಾಗದಲ್ಲಿದ್ದಾರೆ.ಮೊದಲು ಬ್ರಿಟಿಷ್ ಆಡಳಿತಕ್ಕೆ ಸೇರಿದ್ದ ಇದು ರಾಜರ ಆಳಿಕೆಗೆ ಸೇರಿತ್ತು. ೧೮ನೆಯ ಶತಮಾನದಲ್ಲಿ ಇಂದಿನ ಬಲೂಚಿಸ್ತಾನವನ್ನು ಕಲತ್, ಮಕ್ರಾನ್ಲಾಸ್ ಬೇಲಾ ಎಂದು ವಿಂಗಡಿಸಲಾಗಿತ್ತು ಬಲೂಚಿಸ್ತಾನ ನೈಸರ್ಗಿಕವಾಗಿ ಸಮೃದ್ಧ. ಅಲ್ಲಿ ಕಲ್ಲಿದ್ದಲು, ಚಿನ್ನದಂಥ ನಿಕ್ಷೇಪ ಹೇರಳವಾಗಿದೆ. ಬಲೂಚಿಸ್ತಾನದ ಭೂಪ್ರದೇಶ ೩೪೭, ೧೯೦ ಚದರ್ ಕಿಲೋಮೀಟರುಗಳು, ಇದರ ಪಾಕಿಸ್ತಾನದ ನೈಋತ್ಯದಲ್ಲಿ  ಇದು ಇದ್ದು,  ಉತ್ತರ ಮತ್ತುವಾಯವ್ಯದಲ್ಲಿ ಅಪ್ಘಾನಿಸ್ತಾನ,  ನೈಋತ್ಯದಲ್ಲಿ ಇರಾನ್, ಈಶಾನ್ಯದಲ್ಲಿ ಪಂಜಾಬ್, ಸಿಂಧ್, ಖೈಬರ್ ಹಾಗೂ ಒಕ್ಕೂಟ ವ್ಯವಸ್ಥೆ ಆಡಳಿತದ ಆದಿವಾಸಿ ಜನವಸತಿಗಳಿವೆ.ದಕ್ಷಿಣದಲ್ಲಿ ಅರಬ್ಬಿ ಸಮುದ್ರವಿದೆ, ಬಲೂಚಿಸ್ತಾನ ಇರಾನ್ ಪ್ರಸ್ಥಭೂಮಿಯ ಈಶಾನ್ಯ ವಲಯದಲ್ಲಿದೆ, ಇದು ಮಧ್ಯಪ್ರಾಚ್ಯ ಮತ್ತು ಏಷ್ಯಾದ ನೈಋತ್ಯ, ದಕ್ಷಿಣ ಭಾಗದಲ್ಲಿದೆ.ಮಧ್ಯ ಏಷ್ಯಕ್ಕೆ ಬರುವ ಎಲ್ಲ ಹಡಗುಗಳಿಗೆ ಹೆಬ್ಬಾಗಿಲು ಎನಿಸಿದ ಹರ್ಮಾಜ್ ಕೊಲ್ಲಿ ಇಲ್ಲೇ ಇದೆ. ಬಲೂಚಿಸ್ತಾನ ಪ್ರತ್ಯೇಕತಾವಾದಿಗಳು ಇಷ್ಟು ಕಾಲ ಕಾದಿದ್ದು ಇದೀಗ ತಮ್ಮದು ಪ್ರತ್ಯೇಕದೇಶವೆಂದು ಘೋಷಿಸಿಕೊಂಡುಬಿಟ್ಟಿದ್ದಾರೆ, ಭಾರತದಲ್ಲಿ ಬಲೂಚಿಸ್ತಾನದ ರಾಯಭಾರ ಕಚೇರಿಯನ್ನೂ ಆರಂಭಿಸಲಾಗಿದೆ. ಅಲ್ಲಿನ ಉನ್ನತ ಹುದ್ದೆಗೆ ಪಾಕಿಸ್ತಾನಿ ಮೂಲದ ಹಿಂದೂ ಮಹಿಳೆ ಕಾಶಿಶ್ ಚೌಧರಿ ಅನ್ನುವವರನ್ನು ಅಲ್ಲಿನ ಕಮಿಶನರ್ ಹುದ್ದೆಗೆ ಆಯ್ಕೆ ಮಾಡಿಕೊಂಡಿದೆ. ಸಾಮಾಜಿಕ ರೀತಿಯಲ್ಲಿ ಬಲೂಚಿಸ್ತಾನ ಪಾಕಿಸ್ತಾನಕ್ಕಿಂತ ಉತ್ತಮ ನಡವಳಿಕೆ ಹೊಂದಿದೆ ಎಂಬುದು ಇದರಿಂದ ತಿಳಿಯುತ್ತದೆ. ತಮ್ಮನ್ನು ದೇಶವಾಗಿ ಪರಿಗಣಿಸಿ ಎಂದು ಭಾರತ ಹಾಗೂ ವಿಶ್ವಸಂಸ್ಥೆಗೆ ಅದು ಕೋರಿದೆ, ಭಾರತ ಈಗಾಗಲೇ ಇದಕ್ಕೆ ಗುಣಾತ್ಮಕವಾಗಿ ಸ್ಪಂದಿಸಿ ಬಲೂಚಿಸ್ತಾನದ ರಾಯಭಾರ ಕಚೇರಿಯನ್ನು ಆರಂಭಿಸಿದೆ, ಬಲೂಚಿಗಳ ಮುಖಂಡ ಮಿರ್‌ಯಾರ್ ಬಲೂಚ್ ದೇಶದ ಮುಖಂಡತ್ವವನ್ನು ವಹಿಸಿಕೊಂಡು ಯಶಸ್ಸು ಕಂಡಿದ್ದಾನೆ. ಬಲೂಚಿಸ್ತಾನದಲ್ಲಿ ಕ್ರಿಪೂ ೭೦೦೦ ವರ್ಷದಷ್ಟು ಹಳೆಯದೆಂದು ಹೇಳಲಾದ ಮಾನವ ವಸತಿ ಪ್ರದೇಶ ಕೂಡ ದೊರೆತಿದೆ, ಅದಕ್ಕೆ ವಾಸ್ತವಿಕವಾಗಿ ಪಾಕಿಸ್ತಾನಕ್ಕಿಂತ ದೊಡ್ಡ ಇತಿಹಾಸ ಹಾಗೂ ಬೆಳೆಯುವ ಶಕ್ತಿ ಖಂಡಿತ ಇದೆ. ಆದರೆ ಈ ಶುರುವಾತಿನಲ್ಲಿ ಅದಕ್ಕೆ ಎಂಥ ಮುಖಂಡತ್ವ ದೊರೆಯುತ್ತದೆ ಎಂಬುದು ಮುಖ್ಯ, ನಿಜವಾಗಿ ಪಾಕಿಸ್ತಾನದ ಶತ್ರು ಭಾರತವಲ್ಲ, ಅದು ಬಲೂಚಿಸ್ತಾನ. ೧೯೪೭ರಲ್ಲಿ ಬ್ರಿಟಿಷರು ಬಿಟ್ಟು ಹೋದ ಕೆಲವುಕಾಲ ಸ್ವತಂತ್ರವಾಗಿತ್ತು, ಅಲ್ಲದೇ ಆ ಪ್ರದೇಶದಲ್ಲಿ ಇದು ಪಾಕಿಸ್ತಾನಕ್ಕಿಂತ ಮುಂಚೆ ಹುಟ್ಟಿv ಪಾಕಿಸ್ತಾನ ಭಾರತದಿಂದ ಬೇರ್ಪಟ್ಟಾಗ ಬಲೂಚಿಗಳ ನ್ನು ನಂಬಿಸಿದ ಜಿನ್ನಾ ಸ್ವಲ್ಪ ಕಾಲದ ನಂತರ ಪ್ರತ್ಯೇಕ ಮಾಡುವುದಾಗಿ ನಂಬಿಸಿ ಕಲಾತ್ ನ ರಾಜನಿಗೆ ಮೋಸ ಮಾಡಿದ, ಬಲೂಚಿಸ್ತಾನದಲ್ಲಿರುವ ಕಚ್ಚಾತೈಲ, ತಾಮ್ರ, ಚಿನ್ನದಂಥ ನೈಸರ್ಗಿಕ ಸಂಪನ್ಮೂಲಕ್ಕಾಗಿ ಪಾಕಿಸ್ತಾನ ಅದನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು, ಇದನ್ನರಿತ ಕಲಾತ್ ರಾಜನ ಸಹೋದರ ಪಾಕಿಸ್ತಾನವನ್ನು ವಿರೋಧಿಸುತ್ತಲೇ ಇದ್ದ, ಜೊತೆಗೆ ಪಾಕಿಸ್ತಾನ ಚೀನಾದೊಂದಿಗೆ ಸೇರಿ ಬಲೂಚಿಸ್ತಾನ ಪ್ರದೇಶದಲ್ಲಿ ವಾಣಿಜ್ಯ ಕಾರಿಡಾರ್ ಮಾಡಿದ್ದು ಹಾಗೂ ಅಲ್ಲಿನ ಸಂಪನ್ಲೂಲವನ್ನು ಚೀನಾ ಲೂಟಿ ಮಾಡಿದರೂ ಬಲೂಚಿಗಳಿಗೆ ಏನೂ ಉದ್ಯೋಗ ಕೊಡದಿದ್ದುದು ಬಲೂಚಿಗಳಿಗೆ ಮತ್ತಷ್ಟು ಅಸಮಾಧಾನ ಉಂಟುಮಾಡಿತ್ತು, ಇದರಿಂದ ಚೀನಾ ಜನರನ್ನು ಬಲೂಚಿಗಳು ಹಿಂಸಿಸತೊಡಗಿದರು. ಈಚೆಗೆ ಬಲೂಚಿಗಳು ಪಾಕಿಸ್ತಾನದ ಸೇನೆ ಇದ್ದ ಇಡೀ ರೈಲನ್ನು ಅಪಹರಿಸಿದ್ದರು, ಬಲೂಚಿಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಬಲೂಚಿಗಳನ್ನು ಇನ್ನಿಲ್ಲದಂತೆ ಕಾಡಿಸಿ ಹತ್ಯೆ ಮಾಡಲಾರಂಭಿಸಿತ್ತು. ಮೊದಲೇ ದಿವಾಳಿ ಎದ್ದ ಪಾಕಿಸ್ತಾನ ಬಲೂಚಿಸ್ತಾನ ಕೈಬಿಟ್ಟರೆ ಮತ್ತಷ್ಟು ಕೆಡುತ್ತದೆಯಾದ್ದರಿಂದ ಅದು ತನ್ನ ಬಳಿಯೇ ಇರಲೆಂದು ಪಾಕಿಸ್ತಾನ ಹವಣಿಸಿತ್ತು, ಆದರೆ ಬಲೂಚಿಸ್ತಾನ ಸ್ವತಂತ್ರವಾಗಿದೆ, ಇಷ್ಟರಲ್ಲೇ ಪಾಕಿಸ್ತಾನ ಸಂಪೂರ್ಣನಾಶವಾಗುತ್ತದೆ ಎಂಬುದು ಸ್ಪಷ್ಟ, ಇಷ್ಟಾಗಿಯೂ ಪಾಕಿಸ್ತಾನ ಉಳಿದರೆ ಬಲೂಚಿಸ್ತಾನದಿಂದ ಅದಕ್ಕೆ ಆಗುವ ಸಮಸ್ಯೆ ನಿರಂತರವೇ ಆಗುತ್ತದೆ, ಸದ್ಯ ತನ್ನನ್ನು ತಾನು ಸರಿಯಾಗಿ ಕಟ್ಟಿಕೊಳ್ಳಲು ಬಲೂಚಿಸ್ತಾನ ಸರಿಯಾದ ಆಡಳಿತಗಾರರನ್ನು ಹಾಗೂ ಸೂಕ್ತ ನಾಯಕರನ್ನು ಹುಡುಕುತ್ತಿದ್ದು ಅದಕ್ಕೆ ಭಾರತ ನೆರವಾಗುತ್ತಿದೆ. ಇದರಿಂದ ಪಾಕಿಸ್ತಾನದ ನಾಶದ ಜೊತೆಗೆ ಭಾರತಕ್ಕೆ ಹೊಸ ಮಿತ್ರ ದೊರೆತಂತಾಗುತ್ತದೆ, ಇದರಿಂದ ಎರಡೂ ದೇಶಗಳಿಗೆ ಲಾಭವಿದೆ, ಬಲೂಚಿಗಳ ಸ್ವಾತಂತ್ರ್ಯದಿದ ಪಶ್ತೂನರು, ವಹಾಬಿಗಳು ಮತ್ತಿತರ ಪಾಕಿಸ್ತಾನದ ಆಂತರಿಕ ವಿರೋಧಿಗಳು ಪಾಕ್ ನಿಂದ ಬೇರೆಯಾಗುವ ತಯಾರಿ ನಡೆಸುತ್ತಿವೆ, ಇದರಿಂದ ಪಾಕಿಸ್ತಾನ ಐದಾರು ಭಾಗವಾಗುವ ಸಾಧ್ಯತೆ ಹೆಚ್ಚಾಗಿದೆ, ಇದನ್ನು ಪಾಕಿಸ್ತಾನ ತಡೆಯಲಾರದು. ಏಕೆಂದರೆ ದಶಕಗಳ ಹಿಂದೆ ಬಲಿಷ್ಠ ರಷ್ಯಾದಲ್ಲೂ ಇಂಥ ಹೋರಾಟ ನಡೆದು ಅದು ಹೋಳಾಗಿ ಹೋಗಿತ್ತು. ಅಷ್ಟಕ್ಕೂ ಬಲೂಚಿಗಳು ರಿಲಿಜನ್ ಹೆಸರಲ್ಲಿ ಬೇರಾಗುತ್ತಿಲ್ಲ, ಅವರು ಹೋರಾಡುತ್ತಿರುವುದು ತಮ್ಮ ಸಂಪನ್ಮೂಲ ಉಳಿಸಿಕೊಳ್ಳಲು. ಇದು ಸಕಾರಣವಾಗಿದೆ. ಆದರೆ ಹೊಸದಾಗು ಹುಟ್ಟಿಕೊಳ್ಳುತ್ತಿರುವ ಬಲೂಚಿಸ್ತಾನಕ್ಕೆ ಇರುವ ಸಮಸ್ಯೆ ಅಲ್ಲಿನ ಹೋರಾಟಗಾರರನ್ನು ಕೆಲವು ದೇಶಗಳು ಉಗ್ರರೆಂದು ಪರಿಗಣಿಸಿರುವುದು, ಜೊತೆಗೆ ಸುತ್ತಲೂ ಶಿಯಾ-ಸುನ್ನಿ ಗದ್ದಲ ಉಳ್ಳ ದೇಶಗಳು ಬಲೂಚಿಗಳಿಗೆ ದೊಡ್ಡ ತಲೆಬೇನೆ ಆಗಲಿದೆ, ಇದರಿಂದ ಅದು ಉತ್ತಮ ದೇಶವಾಗಿ ರೂಪುಗೊಳ್ಳಲು ಕಷ್ಟವಾಗುತ್ತದೆ.   

ಜಿನ್ನಾಗೆ ಬಲೂಚಿಸ್ತಾನವನ್ನು ಪಾಕಿಸ್ತಾನದೊಳಗೆ ಸೇರಿಸಿಕೊಳ್ಳುವುದು ಇಷ್ಟವಿರಲಿಲ್ಲವೆಂದು ಹೇಳಲಾಗುತ್ತದೆ. ಆಗಿನಿಂದಲೂ ಬಲೂಚಿಗಳು ಪಾಕಿನೊಂದಿಗೆ ವಿರೋಧ ತೋರಿಸುತ್ತಲೇ ಇದ್ದಾರೆ, ಜುಲ್ಫಿಕರ್ ಅಲಿ ಭುಟ್ಟೋ ಬಲೂಚಿಗಳ ವಿರುದ್ಧ ಸೇನೆ ಬಳಸಿದ್ದರು. ಬಲೂಚಿಗಳ ದೊಡ್ಡ ಸಮಸ್ಯೆ ಅಂದರೆ ಅವರ ಜನಸಂಖ್ಯೆ ಹೆಚ್ಚು ಇಲ್ಲದಿರುವುದು ಹಾಗೂ ಬಲೂಚಿಗಳು ಎಲ್ಲೆಡೆ ಹರಿದು ಹಂಚಿಹೋಗಿರುವುದು, ಇವರನ್ನು ಭಾಷೆ ಜನಾಂಗ ಮುಂತಾದ ಸುಲಭದಲ್ಲಿ ಒಗ್ಗೂಡಿಸುವ ಸಂಗತಿಗಳಿಂದ ಒಂದಾಗಿಸಲಾಗದು, ಇದರ ಲಾಭವನ್ನೂ ಪಾಕಿಸ್ತಾನ ಪಡೆಯುತ್ತಿದೆ, ಹೋರಾಟವನ್ನು ಬಲೂಚಿಗಳು ಮಾಡಬಹುದು ಆದರೆ ದೇಶವಾಗಿ ಅದು ರೂಪುಗೊಳ್ಳುವ ಸವಾಲು ಬಹಳ ದೊಡ್ಡದಿದೆ.

ಬಲೂಚಿಸ್ತಾನಕ್ಕೆ ನೈಸರ್ಗಿಕ ಸಂಪತ್ತು ಇರುವುದೇ ಬಹುದೊಡ್ಡ ಆಪತ್ತಿಗೆ ಕಾರಣವಾಗಿದೆ. ಇಂದಲ್ಲ ನಾಳೆ ಅದಕ್ಕೆ ವಿಪತ್ತು ಇರುವುದೇ ಈ ಸಂಪನ್ಮೂಲದಿAದ. ಈಗಾಗಲೇ ಚೀನಾ ವಾಣಿಜ್ಯ ಕಾರಿಡಾರ್ ನೆಪದಲ್ಲಿ ಬಲೂಚಿ ಪ್ರದೇಶದಲ್ಲಿ ಕಾಲಿಟ್ಟಿದೆ.  ಅದರ ಉದ್ದೇಶ ಸ್ಪಷ್ಟವಾಗಿದೆ, ಅಲ್ಲಿನ ಸಂಪನೂಮೂಲವನ್ನು ಸೂರೆ ಮಾಡುವುದು ಅದರ ಗುರಿ, ಜನಸಂಪನ್ಮೂಲ ಕಡಿಮೆ ಇರುವ ಬಲೂಚಿಸ್ತಾನದಲ್ಲಿ ಬೌದ್ಧಿಕ ಆಸ್ತಿ ಕೂಡ ಇಲ್ಲದ ಕಾರಣಕ್ಕೆ ಹೊಸದಾಗಿ ದೇಶಕಟ್ಟುವುದು ಸವಾಲಿನ ಕೆಲಸವಾಗಲಿದೆ, ಅದರ ಸುತ್ತ ಶತ್ರು ರಾಷ್ಟçಗಳೇ ತುಂಬಿವೆ, ಇಸ್ರೇಲ್ ಕೂಡ ಇಂಥ ಸ್ಥಿತಿಯಲ್ಲಿದ್ದರೂ ಅದಕ್ಕೆ ಬೌದ್ಧಿಕ ಸಂಪತ್ತು ಸಮೃದ್ಧವಾಗಿತ್ತು. ಅದು ಎಲ್ಲವನ್ನೂ ಎದುರಿಸಿತು, ಎದುರಿಸುತ್ತಿದೆ. ಆದರೆ ಬಲೂಚಿಗಳಿಗೆ ಇದು ಕಷ್ಟ. ಇದನ್ನೇ ಬಳಸಿಕೊಳ್ಳುತ್ತಿರುವ ಚೀನಾ ಹಳೆಯ ಪಾಕಿಸ್ತಾನಕ್ಕೆ ನೆರವಾಗುವ ನೆಪದಲ್ಲಿ ಬಲೂಚಿಸ್ತಾನದಲ್ಲಿ ತನ್ನ ಕಾರ್ಮಿಕ ವರ್ಗವನ್ನು ಸಾಕಷ್ಟು ತೂರಿಸಿದೆ, ನಿಧಾನವಾಗಿ ಅದನ್ನು ತನ್ನ ಜನರ ಮೂಲಕ ವಶಮಾಡಿಕೊಳ್ಳುವುದು ಅದಕ್ಕೆ ಸುಲಭವಾಗಲಿದೆ. ಇದರ ಬಗ್ಗೆ ಬಲೂಚಿಗಳು ಸದಾ ಎಚ್ಚರದಿಂದ ಇರಬೇಕಿದೆ.

ಬಲೂಚಿಗಳ ಶಕ್ತಿ ಅವರ ಸಂಪ್ರದಾಯ ನಿಷ್ಠೆ. ಅವರ ಸಂಸ್ಕೃತಿ ಅಲೆಮಾರಿಗಳು, ಆದಿವಾಸಿಗಳು ಮೊದಲಾದ ಮಿಶ್ರಣದಿಂದ ಸಮೃದ್ಧವಾಗಿದೆ. ಆದರೆ ಈ ನೆಪದಲ್ಲಿ ಅವರು ಪರಸ್ಪರ ಕಚ್ಚಾಡುತ್ತಿಲ್ಲ, ತಮ್ಮ ಸಂಪ್ರದಾಯಕ್ಕೆ ಅವರು ಬದ್ಧರು. ಇದು ಅವರನ್ನು ಒಗ್ಗೂಡಿಸಿದೆ, ಪರಸ್ಪರ ಗೌರವ ಅವರಲ್ಲಿ ದೊಡ್ಡ ಮೌಲ್ಯ, ಸಿಂಧಿ, ಪಶ್ತೋ,ಬ್ರೂಹಿ ಮತ್ತು ಬಲೂಚಿ ಭಾಷೆಯನ್ನು ಅವರು ಬಳಸುತ್ತಾರೆ, ಬಲೂಚಿ ಜನಪದ ನೃತ್ಯ, ಸಂಗೀತಗಳು ಸಂಪದ್ಭರಿತವಾಗಿದೆ. ಸದ್ಯ ತಾತ್ಕಾಲಿಕವಾಗಿ ಅದರ ರಾಜಧಾನಿಯಾಗಿರುವ ಕ್ವೆಟ್ಟಾದಲ್ಲಿ ಪ್ರಾಚೀನ ಸ್ಮಾರಕಗಳಿವೆ, ಪ್ರತಿವರ್ಷ ಮಾರ್ಚ್ ೨ರಂದು ತಮ್ಮ ಸಾಂಸ್ಕೃತಿಕ ಹಬ್ಬ ಆಚರಿಸಿಕೊಳ್ಳುವ ಬಲೂಚಿಗಳು ತಮ್ಮ ಎಲ್ಲ ಹಳ್ಳಿಗಳ ನೃತ್ಯ, ಆಟೋಟಗಳನ್ನು ಜಾತ್ರೆಗಳನ್ನು ಒಂದೆಡೆ ಸೇರಿ ಆಚರಿಸಿ ಸಂಭ್ರಮಿಸುತ್ತಾರೆ. ಗಾಳಿ ಮತ್ತು ಸಮುದ್ರ ಶಕ್ತಿಯನ್ನು ಹೆಚ್ಚಾಗಿ ನಂಬುವ ಇವರು ಇವುಗಳಿಂದ ಕೆಟ್ಟ ದೃಷ್ಟಿ ಮನುಷ್ಯರ ಮೇಕೆ ಉಂಟಾಗುತ್ತದೆ ಎಂದು ನಂಬುತ್ತಾರೆ, ಅವರ ಪಶ್ತೋ ಭಾಷೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಾತನಾಡುವ ೯೯ ನೆಯ ಸ್ಥಾನದಲ್ಲಿದೆ.

No comments:

Post a Comment