Friday, 9 May 2025

ನಮ್ಮ ಪ್ರಸನ್ನರು


ಅವರು ಎ ವಿ ಪ್ರಸನ್ನ. ಹೌದು. ಅದು ೧೯೯೦ರ ದಶಕ. ನಾ ನು ಮೈಸೂರಿನಲ್ಲಿ ಉನ್ನತ ಶಿಕ್ಷಣ ಮುಗಿಸಿ ಪಿ ಎಚ್ ಡಿ ಸಂಶೋಧನೆ ಮಾಡುತ್ತಿದ್ದೆ. ಆಗ ಗುಲ್ಬರ್ಗದಿಂದ ಪ್ರಕಟವಾಗುತ್ತಿದ್ದ ಪ್ರೊ. ಸಂಗಮೇಶ ಸವದತ್ತಿಮಠ ಅವರು ಹೊರತರುತ್ತಿದ್ದ ಸಂಶೋಧನ ವ್ಯಾಸಂಗ ಪತ್ರಿಕೆಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರತಿನಿಧಿಯಾಗಿ ಸಂಶೋಧನಾ ಚಟುವಟಿಕೆಗಳ ಕುರಿತು ಮಾಹಿತಿ ಕೊಡುತ್ತಿದ್ದೆ, ಹೀಗೆ ಬೇರೆ ಬೇರೆ ವಿಶ್ವವಿದ್ಯಾನಿಲಯಗಳ ಇಂಥ ಮಾಹಿತಿ ಅದರಲ್ಲಿ ಬರುತ್ತಿತ್ತು. ಆಗ ನನಗೆ ಪರಿಚಯವಾದದ್ದು ಎ ವಿ ಪ್ರಸನ್ನರ ಹೆಸರು, ಅಷ್ಟರಲ್ಲಾಗಲೇ ಅವರ ಹೆಸರು ಗಮಕದ ಮೂಲಕ ಪರಿಚಯವಾಗಿತ್ತು, ಯೋಗಾಯೋಗ. ನಾನು ೨೦೧೧ರಲ್ಲಿ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಸಹಾಯಕ ಪ್ರಾಧ್ಯಾಪಕನಾಗಿ ಸೇರಿಕೊಂಡೆ. ವಿಶ್ವವಿದ್ಯಾನಿಲಯ ನನ್ನ ಮೇಲೆ ನಂಬಿಕೆ ಇಟ್ಟು ಕುಮಾರವ್ಯಾಸ ಪೀಠ ಸ್ಥಾಪಿಸಿ ಅದರ ಕೆಲಸವನ್ನು ನನಗೆ ವಹಿಸಿ ಸಂಯೋಜಕನಾಗಿ ನೇಮಿಸಿತು, ಏನಾದರೂ ಒಳ್ಳೆಯ ಕೆಲಸ ಮಾಡಿ ತೋರಿಸುವ ಹಠ ತೊಟ್ಟಿದ್ದೆ. ಆಗ ನನ್ನ ನೆರವಿಗೆ ಬಂದವರು ಗುರುಗಳಾದ ಪ್ರೊ. ಟಿ ವಿ ವೆಂಕಟಾಚಲ ಶಾಸ್ತ್ರಿಗಳು. ಅವರು ಪೀಠದ ಕೆಲಸ ಸರಿಯಾಗಿ ನಡೆಯಲು ಡಾ, ಎ ವಿ ಪ್ರಸನ್ನರ ಹೆಸರು ಸೂಚಿಸಿದರು, ನಾನು ಅವರ ನಿರಂತರ ಸಲಹೆ ಸಹಕಾರ ಪಡೆಯಲು ಅವರನ್ನು ಪೀಠದ ಸಂದರ್ಶಕ ಪ್ರಾಧ್ಯಾಪಕರನ್ನಾಗಿ ಮಾಡಲು ವಿಶ್ವವಿದ್ಯಾನಿಲಯವನ್ನು ಕೋರಿದೆ, ಅದರಂತೆ ಆಯಿತು, ನನ್ನ ಭಾಗ್ಯ, ಇಬ್ಬರು ದಿಗ್ಗಜರ ನೆರವು ಬೆಂಬಲ ಸಿಕ್ಕಿತು. ಪೀಠದ ಕೆಲಸ ಸುಲಭವಾಯ್ತು.

ಆಯಿತು, ಇವರ ನಿರ್ದೇಶನದ ಅಡಿಯಲ್ಲಿ ಪೀಠದ ಕೆಲಸ ಶುರು ಮಾಡಿದೆ, ಮೊದಲ ಕೆಲಸ ಕುಮಾರವ್ಯಾಸ ಭಾರತದ ಪರಿಷ್ಕರಣೆ ಮಾಡುವುದಾಗಿತ್ತು, ಮಾನ್ಯ ಕುವೆಂಪು ಹಾಗೂ ಮಾಸ್ತಿಯವರ ಸಂಪಾದಕತ್ವದಲ್ಲಿ ಹೊರಬಂದಿದ್ದ ದಶಕಗಳ ಹಿಂದಿನ ಪ್ರತಿಯೇ ಸದ್ಯದ ಅಧಿಕೃತ ಸಂಪುಟವಾಗಿತ್ತು, ಆದರೆ ಅದರಲ್ಲೂ ಸಾಕಷ್ಟು ತಿದ್ದುಪಡಿ ಆಗಬೇಕಾದ ಸಂಗತಿಗಳು ಈಚಿನ ಸಂಶೋಧನೆಗಳ ಅಡಿಯಲ್ಲಿ ಅಗತ್ಯವಿತ್ತು, ಇದನ್ನು ಆದ್ಯತೆಯ ಆಧಾರದಲ್ಲಿ ಕನ್ನಡ ಗಣಕ ಪರಿಷತ್ತಿನ ಸಹಯೋಗದ ಅಡಿಯಲ್ಲಿ ಪೀಠ ಕೈಗೆತ್ತಿಕೊಂಡಿತು. ಎರಡು ಮೂರು ವರ್ಷ ಸತತ ಪರಿಶ್ರಮ ಪಟ್ಟ ಮೇಲೆ ಪ್ರೊ. ಶಾಸ್ತ್ರಿಗಳ ಅಧ್ಯಕ್ಷತೆಯ ಸಂಪಾದಕ ಮಂಡಳಿಯ ಸಹಾಯದೊಂದಿಗೆ ಪರಿಷ್ಕೃತ ಕುಮಾರವ್ಯಾಸ ಭಾರತ ಎರಡು ಸಂಪುಟಗಳಲ್ಲಿ ಹೊರಬಂತು, ಅದರ ಡಿಜಿಟಲ್ ಪ್ರತಿಕೂಡ ಸಿದ್ಧವಿದೆ, ಸದ್ಯದಲ್ಲಿ ಕುಮಾರವ್ಯಾಸನಿಗೆ ಸಂಬಂಧಿಸಿದ ಭಾರತ ಮಾತ್ರವಲ್ಲ, ಅವನಿಗೆ ಸಂಬಂಧಿಸಿದ ಸಮಗ್ರ ವಷಯವುಳ್ಳ ವಿಶ್ವಕೋಶ ಎಂಬ ಪ್ರಶಂಸೆಗೆ ಇದು ಪಾತ್ರವಾಗಿದೆ, ಅದಾಯಿತು, ಕುಮಾರವ್ಯಾಸನಿಗೆ ಸಂಬಂಧಿಸಿದ ವಸ್ತುಸಂಗ್ರಹಾಲಯ ಸ್ಥಾಪನೆ, ಹಸ್ತಪ್ರತಿ ಸಂಗ್ರಹಾಲಯ ಮೊದಲಾದ ಕೆಲಸಗಳು ಇನ್ನೂ ಬಾಕಿ ಇವೆ, ಕಾರಣಾಂತರಗಳಿಂದ ಅವು ಹಿಂದೆ ಬಿದ್ದಿವೆ. ಮುಂದೊಂದು ದಿನ ಅವು ಕೈಗೂಡುವ ಆಸೆ ಇದೆ, ಏಕೆಂದರೆ ಇದರ ಹಿಂದೆ ಇಬ್ಬರ ಅಂಥ ಶಕ್ತಿ ಇದೆ, ಕಾಯುವ. ಅಂತೂ ಈ ನೆಪದಲ್ಲಿ ನಾನು ಮಾನ್ಯ ಪ್ರಸನ್ನರ ಹತ್ತಿರದ ಒಡನಾಟಕ್ಕೆ ಬಂದೆ. ಅವರ ವಿದ್ವತ್ತು, ವ್ಯಕ್ತಿತ್ವದ ಪರಿಚಯವಾಯ್ತು.ಅವರು ಸಾಹಿತ್ಯ ಸಂಶೋಧನೆ ಮಾತ್ರವಲ್ಲ, ಸರ್ಕಾತರದ ಆಡಳಿ ಕಾರ್ಯದಲ್ಲೂ ಸಿದ್ಧಹಸ್ತರು, ಅವರು ಕೆಲಸ ಮಾಡಿದ ಸರ್ಕಾರದ ಎಲ್ಲ ಹಂಯಗಳಲ್ಲೂ ನಿವೃತ್ತರಾಗಿ ಇಷ್ಟು ವರ್ಷಗಳಾದರೂ ಉನ್ನತ ಹೆಸರು ಗೌರವಗಳಿವೆ. ಇದು ಇಂದಿನ ವ್ಯವಸ್ಥೆಯಲ್ಲಿ ಸುಲಭದ ಮಾತಲ್ಲ, ಅಷ್ಟು ಪರಿಶುದ್ಧ ವ್ಯಕ್ತಿತ್ವ ಅವರದು, ಅವರ ಆಡಳಿತ ಒಂದೆಡೆ ಇರಲಿ. ಕೆಲಸ ಶುರು ಮಾಡಿದ್ದೇ ಅಧ್ಯಾಪಕ ಕೆಲಸದಿಂದ. ಬದುಕಿನ ಅನಿವಾರ್ಯತೆ ಅವರನ್ನು ಸರ್ಕಾರದ ಕೆಲಸಕ್ಕೆ ಒಯ್ಯಿತು. ಆದರೆ ಅವರ ಉಪನ್ಯಾಸ ಅಥವಾ ಪ್ರವಚನ ಕೇಳುತ್ತಿದ್ದರೆ ಛೆ, ಶಿಕ್ಷಕ ಕ್ಷೇತ್ರಕ್ಕೆ ಇವರು ಬರದ ಕಾರಣಕ್ಕೆ ಎಂಥ ನಷ್ಟವಾಯಿತೆಂದು ಬೇಸರವಾಗುತ್ತದೆ,  ಹೇಳುತ್ತಾರಲ್ಲ, ಸಂಬಡಿಸ್ ಡ್ಯೂಮ್ಸ್ ಡೇ ಈಸ ಅದರ್ಸ್ ಹೇ ಡೇ ಎಂದು. ಇಲ್ಲಿಯೂ ಹೀಗೆ ಆಯಿತು, ಶಿಕ್ಷಕರಿಗೆ ಡೂಮ್ಸ ಡೇ ಆದರೆ ಆಡಳಿತ ಕ್ಷೇತ್ರಕ್ಕೆ ಅವರು ಹೋಗಿದ್ದು ಹೇ ಡೇ ಆಯಿತು. ಇರಲಿ. ಆದರೆ ನಾವು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನಿಷ್ಟ ವಾರಕ್ಕೊಮ್ಮೆ ಅವರಿಂದ ಸತತ ವರ್ಷಗಟ್ಟಲೆ ವಿಶೇಷ ಉಪನ್ಯಾಸ ಏರ್ಪಡಿಸಿ ಕೇಳಿ ಧನ್ಯರಾಗಿದ್ದೇವೆ, ಮಕ್ಕಳು ಖುಷಿ ಪಟ್ಟಿದ್ದಾರೆ. ಇನ್ನೇನು ಬೇಕು? ಅವರಿಗೆ ಅವರ ಬಹುದೊಡ್ಡ ಪರಿಚಿತ ಬಳಗ ಹಾಗೂ ಸಹೋದ್ಯೋಗಿ ಮಿತ್ರರು ಕೆಲವು ವರ್ಷಗಳ ಹಿಂದೆ ಅರ್ಥಪೂರ್ಣವಾಗಿ ಸ್ನೇಹಶೀಲ ಎಂಬ ಅಭಿನಂದನ ಗ್ರಂಥ ಅರ್ಪಿಸಿದ್ದಾರೆ, ಅದು ಅವರ ಬಹುಮುಖ ಪ್ರತಿಭೆಯ ಕಿರು ಪರಿಚಯ ಮಾಡಿಕೊಡುತ್ತದೆ, ನಿಜ ಇಂಥವರಿಗೆ ಅಂಥ ಗ್ರಂಥ ಅರ್ಪಣೆ ಆಗಬೇಕು. ಆಗಿದೆ. ಆದರೆ ನಮ್ಮ ಪ್ರಸನ್ನರು ಅಷ್ಟೇ ಅಲ್ಲ, ಇನ್ನೂ ಅನೇಕ. ಅವರ ಪ್ರತಿಭೆಗೆ ಈಚೆಗೆ ನಾರಾಚಮ್ಮ ಪ್ರಶಸ್ತಿ ಹಾಗೂ ಕುಮಾರವ್ಯಾಸ ಪ್ರಶಸ್ತಿಗಳು ಸಂದಿವೆ. ನನಗೆ ಒಂದು ಅಚ್ಚರಿ ಅಂದರೆ ನಮ್ಮ ಕನ್ನಡ  ಸಾಹಿತ್ಯ ಸಂಗೀತಗಳಿಗೆ ಸಂಬಂಧಿಸಿದ ಯಾವುದೇ ಗೌರ ಪ್ರಶಸ್ತಿಗಳಿಗೆ ಅವರು ಭಾಜನರಾಗುವ ಅರ್ಹತೆ ಪಡೆದಿದ್ದಾರೆ ಆದರೆ ಅವರು ತಮ್ಮನ್ನು ಹುಡುಕಿಬಂದ ಅನೇಕಾನೇಕ ಪ್ರಶಸ್ತಿಗಳನ್ನು ಗೌರವಗಳನ್ನು ಅತ್ಯಂತ ವಿನಯದಿಂದ ತಮಗಿಂತ ಅರ್ಹರು ಬೇಕಾದಷ್ಟು ಜನರಿದ್ದಾರೆಂದು ಬೇರೆಯವರಿಗೆ ಕೊಡಿಸಿದ್ದಾರೆ, ಆದರೆ ಈಗ ಇವೆರಡು ಗೌರವವನ್ನು ಅವರು ಸ್ವೀಕರಿಸುವಂತೆ ಮಾಡಿದ ಮಹನೀಯರು ನಿಜಕ್ಕೂ ಅಭಿನಂದನಾರ್ಹರು. 

ಮಹಾಕವಿ ಕುಮಾರವ್ಯಾಸನ ಹೆಸರಲ್ಲಿ ಕರ್ನಾಧಟಕ ಸರ್ಕಾರದ ಮಟ್ಟದಲ್ಲಿ ಒಂದು ಸರ್ಥಕ ಪ್ರಶಸ್ತಿ ಸ್ಥಾಪಿಸಿ ಅದು ಅರ್ಹ ಗಮಕಿಗಳಿಗೆ ಸಲ್ಲಬೇಕೆಂದು ದಶಕಗಳ ಕಾಲ ಹೋರಾಟ,ಆಡಿ ಸ್ಥಾಪಿಸಿ ನೂರಾರು ಎಲೆಮರೆಯ ಕಲಾವಿದರಿಗೆ£ನೆರವಾದವರು ಅವರು, ಈ ಪ್ರಶಸ್ತಿ ಶುರುವಾದ ಹೊಸದರಲ್ಲಿಯೇ ಪ್ರಸಿದ್ಧ ಗಮಕಿಗಳಾದ ಇವರ ಹೆಸರೇ ಹತ್‌ತಾರು ಬಾರಿ ಪ್ರಸ್ತಾಪವಾದರೂ ತಾವೇ ಶ್ರಮವಹಿಸಿ ಸ್ಥಾಪಿಸಿದ ಪ್ರಶಸ್ತಿ ತಮಗೆ ಬೇಡ ಎಂಬ ಸೌಜನ್ಯದಿಂದ ನಿರಾಕರಿಸುತ್ತಲೇ ಬಂದವರು ಅವರು. ಆದರೆ ನಮಗೆಲ್ಲ ವಿಶ್ವಾಸವಿತ್ತು ಅದೆಷ್ಟು ಕಾಲ ನಿರಾಕರಿಸುತ್ತಾರೋ ನೋಡುವ ಎಂದು. ಏಕೆಂದರೆ ಅರ್ಹರಿಗೆ ಸಲ್ಲಬೇಕಾದ ಸ್ಥಾನ ಮಾನ ಒಂದಲ್ಲ ಒಂದು ದಿನ ಸಲ್ಲಲೇಬೇಕು, ಈಗ ಅದಾಗಿದೆ. ಇದಕ್ಕಿಂತ ಸಂತೋಷ ಇನ್ನೇನಿದೆ? ನಾನಂತೂ ದಶಕಗಳಿಂದ ಅವರ ಪ್ರವಚನ ಹಾಗೂ ಬರೆಹದ ಅಭಿಮಾನಿ. ನಮ್ಮ ಪೀಠದ ವತಿಯಿಂದ ಕುಮಾರವ್ಯಾಸನ ಜನ್ಮ ಸ್ಥಳದಲ್ಲಿ ಅವನ ಭಾರತದ ಗಮಕ ಏರ್ಪಡಿಸುವ ಆಸೆ ಇತ್ತು. ಪುಣ್ಯಕ್ಕೆ ಪ್ರಸನ್ನ ದಂಪತಿಗಳೇ ಇದನ್ನು ಕುಮಾರವ್ಯಾಸನ ಜನ್ಮ ಸ್ಥಳದಲ್ಲಿ ನಡೆಸಿಕೊಟ್ಟರು. ಅದು ಮರೆಯಲಾಗದ ಅನುಭವ.  ಅವರ ಸಾಹಿತ್ಯ ಸಂಶೋಧನೆ, ಗಮಕಾನುಭವಗಳಿಗೆ ಸಕಲ ಸನ್ಮಾನದ ಭಾಗ್ಯವೂ ಲಭಿಸಲಿ, ಅದನ್ನು ಕಂಡು ಆನಂದಿಸಿ ಧನ್ಯರಾಗೋಣ. ಅವರಿಗೆ ಪ್ರಶಸ್ತಿಗಳು ಸಂದ ಈ ಸಂದರ್ಭದಲ್ಲಿ ಅವರನ್ನು ಕುರಿತು ಬರೆಯುವ ಅವಕಾಶ ಸಿಕ್ಕಿತು. ಇದಕ್ಕಾಗಿ ಅವರಿಗೆ ಕೃತಜ್ಞ. 


No comments:

Post a Comment