Sunday, 26 October 2025

ಚೀನಾದಲ್ಲಿ ಮೋದಿ ಹತ್ಯಗೆ ನಡೆದಿದ್ದ ಸಂಚು ಬಹಿರಂಗ


ಈಚೆಗೆ ಅಕ್ಟೋಬರ್ ಮೂರನೆಯ ವಾರದ ಸಂದರ್ಭದಲ್ಲಿ ಮೋದಿಯವರನ್ನು ಹತ್ಯೆಗೈಯುವ ಸಂಚನ್ನು ಅಮೆರಿಕದ ಸಿಐಎ ರೂಪಿಸಿ ವಿಫಲವಾಯಿತೆಂಬ ವಿಷಯ ಇದೀಗ ಜಾಗತಿಕ ಚರ್ಚೆ ಆಗುತ್ತಿದೆ. ಇದಕ್ಕೆ ಕಾರಣ ಅಮೆರಿಕದ ಸಿಐಎ ಅಧಿಕಾರಿಯೊಬ್ಬ ಢಾಕಾದ ಹೊಟೇಲ್‌ನಲ್ಲಿ ನಿಗೂಢವಾಗಿ ಸತ್ತಿದ್ದು ಇದರಿಂದ ಹಿಂದಿನ ಬೆಳವಣಿಗೆಗಳು ಬಯಲಾಗಿವೆ. ಜೊತೆಗೆ ಕಾನ್ಸ್ಫಿರಸಿ ಥಿಯರಿ ಎಂಬಂತೆ ಇದಕ್ಕೂ ಬೆಂಗಳೂರಿನ ೩೦ಕ್ಕೂ ಹೆಚ್ಚು ಪ್ರಗತಿಪರರಿಗೂ ನಂಟು ಕೂಡ ಹಾಕಲಾಗಿದೆ. ಇವರಲ್ಲಿ ನಕ್ಸಲ್ ಪರ ಅನಿಸಿಕೊಂಡ ಕವಿ ಪತ್ರಕರ್ತರಾದ ತೆಲುಗಿನ ವರವರರಾವ್ ಹೆಸರು ಮುಖ್ಯವಾಗಿ ಮುಂದೆ ಬಂದಿದ್ದು ಈ ಕಾರಣಕ್ಕಾಗಿ ಅವರನ್ನು ಎಸ್ ಐಟಿ ಬಂಧಿಸಿ ಅವರ ಡೈರಿಯನ್ನು ವಶಕ್ಕೆ ಪಡೆದು ಮಾಹಿತಿ ಕಲೆಹಾಕಿದೆ ಎಂದು ಹೇಳಲಾಗುತ್ತಿದೆ, ಇದರ ಪ್ರಕಾರ ಮೋದಿಯವರ ಹತ್ಯೆಗೆ ಅವರ ಬೆಂಗಳೂರಿನ ರ‍್ಯಾಲಿ ಸಂದರ್ಭದಲ್ಲಿ ಹತ್ಯೆಗೈಯುವ ಅಥವಾ ಅವರ ಫ್ರಾನ್ಸಸ ಯಾತ್ರೆಯ ಸಂದರ್ಭ ಎಲ್ಲಿ ಹೇಗೆ ಯಾವ ರೀತಿ ಹತ್ಯೆ ಮಾಡಬೇಕೆಂಬ ಸವಿವರ ಮಾಹಿತಿ ದಾಖಲಿಸಲಾಗಿದೆ ಎಂದು ಹೇಳಲಾಗಿದೆ, ಇದು ಪತ್ರಕರ್ತೆ ಗೌರಿಯವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಯೋಚನೆ ಇತೆಂದು ಹೇಳಲಾಗಿದೆ.

ಇದು ಎಷ್ಟು ನಿಜ ಎಂಬುದು ಇನ್ನೂ ಗೊತ್ತಾಗ ಬೇಕಿದೆ. ಇದರ ನಡುವೆ ಜಾಗತಿಕವಾಗಿ ಸುಳಿದಾಡುತ್ತಿರುವ ವಿಚಾರವೆಂದರೆ ಈ ಸಂಚಿನ ಹಿಂದೆ ಅಮೆರಿಕವಿದೆ ಎಂಬುದು. ಇದಕ್ಕೆ ಕಾರಣವಿಲ್ಲದಿಲ್ಲ, ಮುಖ್ಯವಾಗಿ ಅಮೆರಿಕದ ಬೆದರಿಕೆಗಳಿಗೆ ಅದು ವಿಧಿಸಿದ ಹೆಚ್ಚುವರಿ ತೆರಿಗೆ ಇತ್ಯಾದಿಗಳಿಗೆ ಮೋದಿ ನೇತೃತ್ವದ ಭಾರತ ಬಗ್ಗುತ್ತಿಲ್ಲ. ರಷ್ಯಾದಿಂದ ತೈಲ ಖರೀದಿ ಮಾಡಬೇಡಿ ಅಂದರೆ ಭಾರತ ಕೇಳುತ್ತಿಲ್ಲ. ಅಮೆರಿಕದ ಕರೆನ್ಸಿಗೆ ಜಾಗತಿಕವಾಗಿ ಬೆಲೆ ಕುಸಿಯುವಂತೆ ಭಾರತ ಮಾಡುತ್ತಿದೆ ಎಂಬವು ಮುಖ್ಯ ಕಾರಣಗಳು. ಜೊತೆಗೆ ಮೋದಿ ನೇತೃತ್ವದಲ್ಲಿ ರಷ್ಯಾ, ಚೀನಾ ಮತ್ತು ಭಾರತಗಳು ಒಂದಾಗಿ ಪ್ರಪಂಚದಲ್ಲಿ ಬಲಿಷ್ಠವಾಗುತ್ತಿವೆ. ಹೀಗಾದರೆ ಅಮೆರಿಕಕ್ಕೆ ಕವಡೆ ಕಾಸಿನ ಕಿಮ್ಮತ್ತು ಇರುವುದಿಲ್ಲ, ಇದರ ಹಿಂದೆ ಮೋದಿ ಇದ್ದಾರೆ ಅನ್ನುವುದು, ಇದಕ್ಕೆ ಮೋದಿ ಮುಗಿಸುವುದೇ ಪರಿಹಾರ ಎಂದು ಭಾವಿಸಿದ ಅಮೆರಿಕ ಈ ಸಂಚಿಗೆ ಮುಂದಾಗಿತ್ತು, ಆದರೆ ಭಾರತದ ಅಂತಾರಾಷ್ಟ್ರೀಯ ಗೂಢಚಾರ ಸಂಸ್ಥೆ 'ರಾ' ಅಮೆರಿಕದ ಸಿಐಎಯ ಪಿತೂರಿಯನ್ನು ವಿಫಲವಾಗಿದೆ. ಈ ಕೆಲಸ ಮಾಡಲು ಮೋದಿಯನ್ನು ಅನುಸರಿದುತ್ತಿದ್ದ ಅಮೆರಿಕದ ಅಧಿಕಾರಿ ಜಾಕ್ಸನ್ ಎಂಬಾತ  ಸತ್ತುಬಿದ್ದಿದ್ದ. ಈತ ಹಲವಾರು ತಿಂಗಳಿಂದ ಬಾಂಗ್ಲಾದಲ್ಲಿದ್ದ, ಆಗಸ್ಟ್ ೩೧ರಂದು ಈತನ ಅಂತ್ಯವಾಯ್ತು, ಈತ ಭಾರತದಲ್ಲಿ ಅಸ್ಥಿರತೆ ಸೃಷ್ಟಿಸಲು ಯತ್ನಿಸಿದ್ದ. ಇದರ ಹಿಂದೆ ಭಾರತದ ರಾ ಕೈವಾಡ ಇದೆ ಅನ್ನಲಾಗುತ್ತಿದೆ, ಇದು ಸುಳ್ಳು ಸುದ್ದಿ ಎಂದೂ ಹೇಳಲಾಗುತ್ತಿದೆ. ಆದರೆ ಈ ಮೂಲಕ ಅಮೆರಿಕ ಏನು ಸಾಧಿಸಲು ಹೊರಟಿತ್ತು ಎಂಬುದನ್ನು ಈ ಹಿಂದೆ ನೋಡಲಾಗಿದೆ. ಆದರೆ ರಷ್ಯಾದ ರಕ್ಷಣಾ ಸಂಸ್ಥೆ ಮತ್ತು ಭಾರತದ  ಏಜನ್ಸಿಗಳು ದೇರಿ ಈ ಸಂಚನ್ನು ವಿಫಲಗೊಳಿಸಿವೆ ಎಂಬುದು ಸದ್ಯದ ಸುದ್ದಿ. ಸಾಲದ್ದಕ್ಕೆ ಎಂದೂ ಯಾರಿಗೂ ಕಾಯದ ಪುಟಿನ್  ಶಾಂಘೈನಲ್ಲಿ ಸಭೆ ನಡೆಯುವ ಸಂದರ್ಭದಲ್ಲಿ ಪ್ರತ್ಯೇಕ ಉಳಿದಿದ್ದರೂ ಅಕ್ಟೋಬರ್ ೨೧ರಂದು ಮೋದಿ ಉಳಿದಿದ್ದ ಹೊಟೇಲಿಗೆ ಬಂದು ಮೋದಿಗಾಗಿ ಕಾಯ್ದು ನಿಂತು ತಮ್ಮ ಅತ್ಯದ್ಭುತ ಲಿಮೋಸಿನ್ ಕಾರಿನಲ್ಲಿ ಕೂರಿಸಿಕೊಂಡು ಸಭೆಯ ಸ್ಥಳಕ್ಕೆ ಕಾರಿನಲ್ಲೇ ಪರಸ್ಪರ ಮಾತುಕತೆ ನಡೆಸುತ್ತ ಬಂದಿದ್ದರು. ಪುಟಿನ್ ಕಾರು ಅಂತಿಂಥದ್ದಲ್ಲ, ಅದು ಸಾಮಾನ್ಯ ಬುಲೆಟ್ ಪ್ರೂಫ್ ಕಾರು ಮಾತ್ರವಲ್ಲ, ಅದಕ್ಕೆ ಬಾಂಬ್ ನಿರೋಧಕ ಕ್ಷಿಪಣಿ ನಿರೋಧಕ ಶಕ್ತಿಯೊಂದಿಗೆ ಸ್ವಯಂ ರಕ್ಷಣೆಯ ಹತ್ತಾರು ತಂತ್ರಜ್ಞಾನ ಅಳವಡಿಸಲಾಗಿದೆ. ಇದು ಅಂತ್ಯತ ಸುರಕ್ಷಿತ ಸ್ಥಳವೆಂದು ತಮ್ಮ ಏಜನ್ಸಿಯ ಮೂಲಕ ವಿಷಯ ತಿಳಿದಿದ್ದ ಪುಟಿನ್ ಮೋದಿಯನ್ನು ರಕ್ಷಿಸಿ ನೈಜ ಮಿತ್ರರಾದರೆಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಅಮೆರಿಕ ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಳ್ಳುವುದಿಲ್ಲ, ಬದಲಾಗಿ ಜಾಗತಿಕವಾಗಿ ಯಾವುದೇ ದೇಶ ತನ್ನನ್ನು ಮೀರದಿರುವಂತೆ ನೋಡಿಕೊಳ್ಳಲು ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡುತ್ತದೆ, ಈ ಬೆಳವಣಿಗೆ ಕೂಡ ಅದೇ ಆಗಿದೆ, ಈ ಸಂಚು ಯಶಸ್ವಿಯಾದರೆ ಅಮೆರಿಕ ಒಂದೇ ಹತ್ಯೆಯಲ್ಲಿ ಭಾರತ, ರಷ್ಯಾ ಮತ್ತು ಚೀನಾಗಳನ್ನು ಶಾಶ್ವತವಾಗಿ ದೂರ ಮಾಡುತ್ತಿತ್ತು, ಇಷ್ಟಾದರೂ ಈ ಪ್ರಯತ್ನ ಅಮೆರಿಕದ ಮೇಲೆ ಮಾಡುವ ಆರೋಪ ಮಾತ್ರ ಆಗುವಂತೆ ನೋಡಿಕೊಳ್ಳಲಾಗುತ್ತಿತ್ತು, ಈಗ ಕೂಡ ಈ ವಿಫಲ ಯತ್ನವನ್ನು ಕಾನ್ಸ್ಫಿರಸಿಥಿಯರಿ ಎಂದೇ ಕೆಲವರು ಬಣ್ಣಿಸುತ್ತಿದ್ದಾರೆ, ಈ ಸಂಚು ವಿಫಲವಾಗುವ ಮೂಲಕ ಅಮೆರಿಕದ ಏಜನ್ಸಿಗಳ ಅಶಕ್ತತೆ ಮತ್ತು ಭಾರತ ಗೂಢಚಾರ ಸಂಸ್ಥೆಯ ಸಶಕ್ತತೆಯನ್ನು ಎತ್ತಿ ತೋರಿಸಿದೆ, ಅದೇನೇ ಇರಲಿ, ಮೋದಿಯ ಹತ್ಯೆಯ ಪ್ರಯತ್ನವಂತೂ ಎಲ್ಲೆಡೆ ಇದೆ ಎಂಬುದು ಸಾಬೀತಾಗಿದೆ, ಭಾರತ ಕಳೆದ ಎರಡು ವರ್ಷಗಳಿಂದ ರಷ್ಯಾದಿಂದ ಕಚ್ಚಾ ತೈಲ ಖರೀದಿ ಹೆಚ್ಚಿಸಿಕೊಂಡಿದ್ದು  ಅಂದಿನಿಂದ ಭಾರತದಲ್ಲಿ ಇಂಧನ ಬೆಲೆ ಒಂದೇ ರೀತಿ ಇದ್ದು ಬೆಲೆ ಏರಿಕೆ ಆಗಿಲ್ಲ, ಪೆಟ್ರೋಲ್ ಡೀಸೆಲ್ ಬೆಲೆ ಒಂದೇ ರೀತಿ ಇವೆ. ಇದನ್ನು ಅಂತಾರಾಷ್ಟಿçÃಯ ಬೆಲೆ ಏರಿಳಕ್ಕೆ ಜೋಡಿಸಿದ್ದರೆ ಇಷ್ಟರಲ್ಲಿ ಇವುಗಳ ಬೆಲೆ ಅನೇಕ ಬಾರಿ ಸಾಕಷ್ಟು ಏರಿಳಿತ ಕಾಣುತ್ತಿತ್ತು, ಹಾಗಾಗಿಲ್ಲ, ಈ ವಿಷಯದಲ್ಲೂ ಅಮೆರಿಕ ಅಂತಾರಾಷ್ಟ್ರೀಯ ತೈಲ ಸಂಸ್ಥೆಯ ಮೂಲಕ ಭಾರತದ ಮೇಲೆ ಒತ್ತಡ ಹಾಕಲು ಯತ್ನಿಸಿ ವಿಫಲವಾಗಿತ್ತು, ಈ ಎಲ್ಲ ಉರಿಗಳು ಸೇರಿಕೊಂಡು ಅಮೆರಿಕ ಇಂಥ ಅವಿವೇಕದ ಯತ್ನಕ್ಕೆ  ಕೈ ಹಾಕಿತ್ತು ಅನ್ನಲಾಗಿದೆ, ಏನೇ ಆಗಲಿ ಈ ಕುಯತ್ನ ವಿಫಲವಾಗಿದೆ, ಹೇಳುತ್ತಾರಲ್ಲ, ಕೊಲ್ಲುವವರು ಇರುವಂತೆ ಕಾಯುವವರೂ ಇರುತ್ತಾರೆಂದು ಅದಾಗಿದೆ. 


  


No comments:

Post a Comment