ಡೈಜೆಸ್ಟ್ ನ ಉಪಯುಕ್ತ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಿತ್ತು, ಕೆಲವೊಮ್ಮೆ ಸ್ವತಂತ್ರಲೇಖನಗಳನ್ನು ಕೂಡ. ನಾನು ಅನುವಾದ ಶುರುಮಾಡಿದ್ದು ಅಲ್ಲಿಂದ. ಒಂದು ಪ್ರಕಟಿತ ಪುಟಕ್ಕೆ ಆಗ ೨೦ರೂ ಸಿಗುತ್ತಿತ್ತು. ಅದು ಅಂದಿನ ಸರ್ಕಾರಿ ಲೆಕ್ಕ. ಅದು ಸಾಕಾಗುತ್ತಿತ್ತು. ಒಂದು ಕಡೆ ಓದುತ್ತ ಇನ್ನೊಂದೆಡೆ ಇಂಥ ಕಡೆ ಬರೆಯುತ್ತ, ಆಕಾಶವಾಣಿಯಲ್ಲಿ ಉಪನ್ಯಾಸಕೊಡುತ್ತ, ಬಂದ ಹಣದಲ್ಲಿ ಊಟ ವಸತಿಯ, ಓದಿನ ಅಗತ್ಯ ನಡೆಯುತ್ತಿತ್ತು. ಆಗ ಗುಜರಾತಿನ ನರ್ಮದಾ ಆಂದೋಲನ ಜೋರಾಗಿ ನಡೆಯುತ್ತಿತ್ತು. ಅದರ ಮುಂಚೂಣಿಯಲ್ಲಿದ್ದವರು ಮೇಧಾ ಪಾಟ್ಕರ್. ಅವರ ಬಗ್ಗೆ ಅಂದು ರೀಡಸ ಡೈಜೆಸ್ಟ್ ನಲ್ಲಿ ಬಂದಿದ್ದ ಲೇಖನವನ್ನು ನಾನು ಖುಷಿಯಿಂದ 'ಜನಜಾಗೃತಿಗೆ ಹಾಲೂಡಿಸುತ್ತಿರುವ ತಾಯಿ' ಎಂಬ ಲೇಖನ ಬರೆದಿದ್ದೆ.ಆದರೆ ಇಂದು ಅದೇ ಮೇಧಾ ಅವರ ಬಗ್ಗೆ ವಿಷಾದದಿಂದ / ಮುಗ್ಧಜನರ ಲೂಟಿ ಮಾಡುತ್ತಿರುವ ಚಳವಳಿಗಾರ್ತಿ ಎಂದು ಬರೆಯುತ್ತಿರುವೆ. ಜನ ಬದಲಾಗುತ್ತಾರೆ, ಸಹಜ, ಆದರೆ ಈ ಮಟ್ಟಿಗಾ?
ನೆಹರೂ ಆಡಳಿತ ಕಾಲದಲ್ಲಿ ಭಾರತ ಹೊಸದಾಗಿ ಮೂಡತೊಡಗಿತ್ತು. ಅದರ ಮುಂದೆ ಇದ್ದ ಬಹುದೊಡ್ಡ ಸವಾಲು ಆಹಾರದ್ದು. ಇದಕ್ಕಾಗಿ ೬೦ ಮತ್ತು ೭೦ರದಶಕದಲ್ಲಿ ಆಹಾರಕ್ಕೆ ಹೆಚ್ಚು ಆದ್ಯತೆ ಕೊಡಲಾಯ್ತು, ಅದರ ಭಾಗವಾಗಿ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟುವ ಯೋಜನೆಗಳು ಜಾರಿಯಾದವು. ಗುಜರಾತಿನ ನರ್ಮದಾ ಯೋಜನೆ ಕೂಡ ಅದರಲ್ಲಿ ಒಂದಾಗಿತ್ತು. ಯೋಜನೆ ವಿರುದ್ಧ ನಡೆಸಿದ ಹೋರಾಟದಲ್ಲಿ ಜನ ಬೆಂಬಲದಿಂದ ಗೆದ್ದ ಮೇಧಾ ಅದನ್ನು ನಿಲ್ಲಿಸಿದರು. ದಶಕಗಳಕಾಲ ಈ ಯೋಜನೆ ನಿಂತಿತ್ತು.ನೂರಾರು ಹಳ್ಳಿಗಳ ಜನ ನೀರಿನ ಕೊರತೆಯಿಂದ ಕೃಷಿ ಬಿಟ್ಟು ಉದ್ಯೋಗವಿಲ್ಲದೆ ಸುತ್ತಮುತ್ತಲ ಊರು ತೊರೆಯತೊಡಗಿದ್ದರು. ನಿರುದ್ಯೋಗ ಎಲ್ಲೆಡೆ ತಾಂಡವವಾಡುತ್ತಿತ್ತು. ೨೦೧೭ರಲ್ಲಿ ಮೋದಿ ಈ ಯೋಜನೆಗೆ ಮತ್ತೆ ಚಾಲನೆನೀಡಿದರು. ಇದು ೨೦೨೨ ಸೆಪ್ಟೆಂಬರ್ ನಲ್ಲಿ ಮುಕ್ತಾಯವಾ ಯಿತು. ಈ ಅಣೆಕಟ್ಟಿನ ನೀರಿನಿಂದ ೧೯೯ ಪಟ್ಟಣಗಳ ಜನರಿಗೆ ಹಾಗೂ ೧೧,೭೭೭ ಹಳ್ಳಿಗಳಿಗೆ ನೀರು ದೊರೆಯುತ್ತಿದೆ. ಮಳೆಗಾಲದಲ್ಲಿ ೮೦,೦೦೦ ಹೆಕ್ಟೇರ್ ಭೂಮಿ ಪ್ರವಾಹಕ್ಕೆ ಸಿಲುಕಿ ೩೨೦,೦೦೦ ಜನ ಕಷ್ಟಪಡುತ್ತಿದ್ದರು. ಈ ಅಣೆಕಟ್ಟಿನಿಂದ ಈ ಎಲ್ಲ ಸಮಸ್ಯೆಗಳು ಬಗೆಹರಿದು ಜನರ ಆದಾಯ ಕೂಡ ಏರಿದೆ. ಮೊದಲು ಒಂದು ಬೆಳೆ ತೆಗೆಯುತ್ತಿದ್ದ ಜನ ಈಗ ಎರಡು ಬೆಳೆ ತೆಗೆಯುತ್ತಿದ್ದಾರೆ. ಅವರ ಆದಾಯ ಎರಡೂವರೆಪಟ್ಟು ಏರಿದೆ. ಮೊದಲು ನಡೆದುಹೋಗುತ್ತಿದ್ದವರ ಬಳಿ ಸೈಕಲ್ ಬಂದಿದೆ.ಬೈಕ್ ಇದ್ದವರ ಬಳಿ ಕಾರು ಬಂದಿದೆ. ಇದು ಅಭಿವೃದ್ಧಿಯ ಮಾನದಂಡವೇ ಪ್ರಶ್ನೆ ಬೇರೆ. ಆದರೆ ಇದು ವಾಸ್ತವ ಎಂದು ಅಲ್ಲಿನ ಮಂತ್ರಿಯೊಬ್ಬರು ಹೇಳಿದ್ದಾರೆ.
ಮೊದಲು ಮೊದಲು ನರ್ಮದಾ ನದಿಗೆ ಪ್ರವಾಹ ಬಂದಾಗ೮೦.೦೦೦ ಹೆಕ್ಟೇರ್ ಭೂಮಿ ಕೊಚ್ಚಿಹೋಗುತ್ತಿತ್ತು.೩೨೦.೦೦ ಜನ ಸಂಕಷ್ಟ ಎದುರಿಸುತ್ತಿದ್ದರು. ಇದನ್ನು ಮುಂದಿಟ್ಟುಕೊAಡ ಹೋರಾಟಗಾರರು ಅಣೆಕಟ್ಟು ಕಟ್ಟಿದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ ಎಂದು ವಾದಿಸಿ ಜೋರಾಗಿ ಗದ್ದಲ ಎಬ್ಬಿಸಿದರು. ಈ ಹೋರಾಟಕ್ಕೆ ನಟ ಅಮೀರ್ ಖಾನ್, ಲೇಖಕಿ ಅರುಂಧತಿರಾಯ್ಮೊದಲಾದವರು ಬೆಂಬಲ ನೀಡಿದರು.೧೯೯೩ರಲ್ಲಿ ಅಣೆಕಟ್ಟು ನಿರ್ಮಾಣ ಕೆಲಸ ನಿಂತಿತು. ಮತ್ತೆ ಇದು ದಶಕಗಳ ನಂತರ ಚಾಲನೆ ಪಡೆದು ಇದೀಗ ಮುಕ್ತಾಯ ಕಂಡು ಮೊದಲಿದ್ದ ಸಮಸ್ಯೆಗಳಿಗೆ ಕೊನೆಹಾಡಿ ಸಾಕಷ್ಟು ಉಪಯೋಗಕ್ಕೆ ದಾರಿಮಾಡಿದೆ. ೧೧,೭೭೭ ಹಳ್ಳಿಗಳಿಗೆ, ೯೯ ಪಟ್ಟಣಗಳಿಗೆ ಕುಡಿಯುವ ನೀರು ಲಭಿಸಿದೆ. ಗುಜರಾತಿನಲ್ಲಿ ೮೦,೦೦೦ ಹೆಕ್ಟೇರ್, ರಾಜಸ್ಥಾನದಲ್ಲಿ ೨೪೦.೦೦೦ ಹೆಕ್ಟೇರ್ ಭೂಮಿ ನೀರಾವರಿ ಕಂಡಿದೆ. ಅಲ್ಲಿನ ರೈತರ ಆದಾಯ ಹೆಚ್ಚಿದೆ. ನರ್ಮದಾ ಆಂದೋಲನದಲ್ಲಿ ಹೋರಾಟ ಮಾಡಿದವರಿಗೆ ಈ ಆಣೆಕಟ್ಟಿನಲ್ಲಿ ಕೇವಲ ದೋಷಗಳೇ ಕಂಡಿದ್ದವು.ಆದರೆ ಈಗ ಹೋರಾಟಗಾರರ ಬಳಿ ಉತ್ತರವಿಲ್ಲ. ಅದಿರಲಿ. ದೊಡ್ಡ ದುರಂತ ಎಂದರೆ ಅಂದು ಜನಪರ ಹೋರಾಟಮಾಡಿ ಗೆದ್ದಿದ್ದ ಮೇಧಾ ಪಾಟ್ಕರ್ ವಿರುದ್ಧ ಇಂದು ಮೋಸ ಮಾಡಿದ ಪ್ರಕರಣ ದಾಖಲಾಗಿದೆ. ಅಂದು ನರ್ಮದಾ ಬಚಾವೋ ಆಂದೋಲನ ಮಾಡಿದ್ದ ಮೇಧಾ ಅನಂತರ ನರ್ಮದಾ ನವನಿರ್ಮಾಣ್ ಅಭಿಯಾನ ಆರಂಭಿಸಿ ಒಕ್ಕಲೆದ್ದ ಆದಿವಾಸಿಗಳಿಗೆ ಹಾಗೂ ನರ್ಮದಾ ಅಣೆಕಟ್ಟಿನಿಂದ ಪೀಡಿತರಾದವರ ಮಕ್ಕಳಿಗೆ ಶಿಕ್ಷಣ ಕೊಡಿಸುವ ಸಂಸ್ಥೆ ಶುರು ಮಾಡಿದರು. ಇದು ಕಳೆದ ೧೪ ವರ್ಷಗಳಿಂದ ಸರಿಯಾದ ಲೆಕ್ಕಪತ್ರಕೊಟ್ಟಿಲ್ಲ ಹಾಗೂ ಇದರಲ್ಲಿ ೧೩.೫ ಕೋಟಿ ರೂಗಳ ವಂಚನೆ ಆಗಿದೆ ಎಂದು ೨೦೧೭ರಲ್ಲಿ
ಎಫ್ ಐ ಆರ್ ದಾಖಲಾಗಿದೆ. ಮೇಧಾ ಅವರು ಈ ನಡುವೆ ಮುಂಬೈ ಈಶಾನ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ನಿಂತು ಸೋತಿದ್ದಾರೆ. ಅದೇನೇ ಇರಲಿ ಅಂದು ಅಣೆಕಟ್ಟಿನ ವಿರುದ್ಧ ನಿಂತವರು ಇಂದು ಅದರ ಲಾಭವನ್ನು ಮನಗಂಡು ಹೊಗಳುತ್ತಿದ್ದಾರೆ.
ನಮ್ಮ ದೇಶದಲ್ಲಿ ಎನ್ ಜಿಒ ನಡೆಸುವವರು ಅನೇಕ ಬಾರಿ ಪ್ರಾಣಿಗಳು, ನಿಸರ್ಗ, ಮಕ್ಕಳು ಮುಂತಾದ ವಿಷಯಗಳನ್ನು ಮುಂದಿಟ್ಟುಕೊಂಡು ಸುಲಭವಾಗಿ ಹಣ ಮಾಡುವ ಮಾರ್ಗ ಕಂಡುಕೊಂಡಿದ್ದಾರೆ. ಇಂದು ನರ್ಮದಾ ಆಂದೋಲನ ಕೂಡ ಅಂಥ ಪ್ರಯತ್ನವಾಗಿತ್ತಾ ಎಂಬ ಗುಮಾನಿ ಕೂಡ ಮೂಡಿದೆ. ನಿಜವಾದ ಸೇವೆ ಮಾಡುವ ಎನ್ ಜಿ ಒಗಳು ಇದರಿಂದ ಮುಜುಗರ ಎದುರಿಸುವಂತಾಗಿದೆ.






